ಆನ್​ಲೈನ್​ನಲ್ಲಿ ಕಳೆದುಕೊಂಡಿದ್ದ ಹಣ ವಾಪಸ್!

blank

ವಿಜಯಪುರ: ಡಿಜಿಟಲ್ ಅರೆಸ್ಟ್, ಕ್ರಿಪ್ಟೋ ಟ್ರೇಡಿಂಗ್, ಷೇರ್ ಮಾರ್ಕೆಟಿಂಗ್ ಸೇರಿ ವಿವಿಧ ರೀತಿಯ ಪ್ರಕರಣಗಳಲ್ಲಿ ಹಣ ಕಳೆದುಕೊಂಡ ನಾಲ್ವರಿಗೆ ಮರಳಿ ಹಣ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಸಫಲವಾಗಿದೆ. ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ದಾಖಲಾಗಿರುವ 12 ವಂಚನೆ ಪ್ರಕರಣಗಳ ಪೈಕಿ ನಾಲ್ಕು ಪ್ರಮುಖ ಕೇಸ್​ಗಳಲ್ಲಿ ಒಟ್ಟು 1.47 ಕೋಟಿ ರೂ.ಗಳನ್ನು ವಾಪಸ್ ಕೊಡಿಸಿರುವುದಾಗಿ ಎಸ್​ಪಿ ಲಕ್ಷ್ಮಣ ನಿಂಬರಗಿ ಬುಧವಾರ ಮಾಹಿತಿ ನೀಡಿದರು.

ಪ್ರಕರಣಗಳ ವಿವರ: ವಿಜಯಪುರ ನಗರದ ಸೃಷ್ಟಿ ಕಾಲನಿ ನಿವಾಸಿ ಶೈಲಜಾ ಶಿವಲಿಂಗಸ್ವಾಮಿ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿ 38 ಲಕ್ಷ ರೂ.ವಂಚಿಸಲಾಗಿತ್ತು. ಆರೋಪಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್​ವಾಡಿ 31,52,581 ರೂ.ಗಳನ್ನು ಶೈಲಜಾಗೆ ಮರಳಿ ಕೊಡಿಸಲಾಗಿದೆ. ತಾಳಿಕೋಟಿ ಪಟ್ಟಣದ ರಾಜಕನ್ಯಾ ಬಸವರಾಜ ಅವರಿಗೆ ಟ್ರೇಡಿಂಗ್ ಅಪ್ಲಿಕೇಶನ್ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವ ಆಮಿಷ ತೋರಿಸಿ 87 ಲಕ್ಷ ರೂ.ವಂಚಿಸಲಾಗಿತ್ತು. ಈ ಪ್ರಕರಣದಲ್ಲಿ 68,25,710 ರೂ. ಮರಳಿ ಕೊಡಿಸಲಾಗಿದೆ. ಸಿಂದಗಿಯ ಸಾಫ್ಟ್​ವೇರ್ ಇಂಜಿನಿಯರ್ ಒಬ್ಬರಿಗೆ ಮಾರ್ಕೆಟ್ ಬೆಲೆಗಿಂತ ಕಡಿಮೆ ದರದಲ್ಲಿ ಷೇರುಗಳನ್ನು ನೀಡುವುದಾಗಿ ನಂಬಿಸಿ 1 ಕೋಟಿ ರೂ. ವಂಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 9,97,762ರೂ. ಗಳನ್ನು ವಾಪಸ್ ಕೊಡಿಸಲಾಗಿದೆ. ವಿಜಯಪುರ ನಗರದ ನಿಖಿಲ ಶಿವಾನಂದ ಮೋಜಿ ಇವರಿಗೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ 2 ಕೋಟಿ ರೂ. ವಂಚಿಸಲಾಗಿತ್ತು. ಈ ಪ್ರಕರಣದಲ್ಲಿ 38 ಲಕ್ಷ ರೂ. ವಾಪಸ್ ಕೊಡಿಸಲಾಗಿದೆ ಎಂದು ಎಸ್​ಪಿ ವಿವರ ನೀಡಿದರು.

 

Share This Article

ಇಂಟರ್ನೆಟ್​ ಆಫ್​ ಮಾಡದೇ ದಿಂಬಿನಡಿ ಮೊಬೈಲಿಟ್ಟು​ ಮಲಗ್ತೀರಾ? ಹುಷಾರ್! ಇದರಿಂದಾಗೋ ಹಾನಿ ಬಗ್ಗೆ ತಿಳಿಯಿರಿ | Mobile Internet

Mobile Internet:ಇಂದಿನ ಅತ್ಯಾಧುನಿಕ ಯುಗದಲ್ಲಿ ಮೊಬೈಲ್ ಫೋನ್​ ಜೀವನದ ಅಂಗವಾಗಿಬಿಟ್ಟಿದೆ. ನಾವು ಅದರಲ್ಲಿ ಎಷ್ಟು ಮಗ್ನರಾಗಿದ್ದೇವೆ…

ಮಹಾ ಶಿವರಾತ್ರಿಯಂದು ಬುಧ ಸಂಕ್ರಮಣ: ಈ 5 ರಾಶಿವರಿಗೆ ಅದೃಷ್ಟವೋ ಅದೃಷ್ಟ, ಧನ ಲಾಭ! Zodiac Signs

Zodiac Signs : ಮಹಾ ಶಿವರಾತ್ರಿ ಹಬ್ಬ ಸಮೀಪಿಸುತ್ತಿದೆ. ಫೆಬ್ರವರಿ 26 ರಂದು ಮಹಾ ಶಿವನ…

ನಿದ್ರೆಯಿಂದ ಕ್ಯಾನ್ಸರ್​ವರೆಗೆ… ದ್ರಾಕ್ಷಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ! Grapes

Grapes : ಪ್ರತಿದಿನ ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದ್ರಾಕ್ಷಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.…