ಲಾಕ್ ಡೌನ್ ಪರಿಣಾಮ: ಮದ್ಯ ಸಿಗದೆ ಮತ್ತೆ ಮೂವರ ಆತ್ಮಹತ್ಯೆ!

ಕರೊನಾ ಸೋಂಕು ತಗುಲಿ ಸತ್ತವರಿಗಿಂತ ಅದರ ನಿಯಂತ್ರಣಕ್ಕಾಗಿ ಮಾಡಿರುವ ಲಾಕ್ ಡೌನ್ ಪರಿಣಾಮವಾಗಿ ಸಾಯುತ್ತಿರುವವರ ಸಂಖ್ಯೆಯೇ ಜಾಸ್ತಿಯಾಗುತ್ತಿದೆ. ರಾಜ್ಯದೆಲ್ಲೆಡೆ ಮದ್ಯದ ಅಂಗಡಿಗಳು ಹಲವು ದಿನಗಳಿಂದ ಬಂದ್ ಆಗಿದ್ದು, ಎಲ್ಲೆಡೆ ಮದ್ಯ ಮಾರಾಟ ಸ್ಥಗಿತವಾಗಿದೆ. ಲಾಕ್ ಡೌನ್ ಜಾರಿ ಆಗುವುದಕ್ಕಿಂತ ಮೊದಲು ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಮದ್ಯ ಸಹ ಖಾಲಿಯಾಗಿದೆ. ಹಾಗಾಗಿ ಕುಡಿಯುವುದಕ್ಕೆ ಮದ್ಯ ಸಿಗದೇ ಮತ್ತೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರಪನಹಳ್ಳಿ ತಾಲೂಕಿನ ಗರ್ಭಗುಡಿ ತಾಂಡದಲ್ಲಿ ಪಾಲ್ಯಾ ನಾಯ್ಕ್ ಎಂಬಾತ ಬ್ರ್ಯಾಂಡಿ ಸಿಗುತ್ತಿಲ್ಲ ಎಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. … Continue reading ಲಾಕ್ ಡೌನ್ ಪರಿಣಾಮ: ಮದ್ಯ ಸಿಗದೆ ಮತ್ತೆ ಮೂವರ ಆತ್ಮಹತ್ಯೆ!