ಫೈನಾನ್ಸ್ ಕಿರುಕುಳ ಖಂಡಿಸಿ ರೈತಸಂಘ ಪ್ರತಿಭಟನೆ

blank

ಚನ್ನಗಿರಿ: ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದರೂ ಸಾಲ ನೀಡಿದವರು ಮನೆಯ ಮುಂದೆ ಬಂದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತರು ಫೈನಾನ್ಸ್ ಕಚೇರಿಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತಸಂಘದ ಹಸಿರುಸೇನೆ ಅಧ್ಯಕ್ಷ ಬಸವಾಪುರ ರಂಗನಾಥ್ ಮಾತನಾಡಿ, ಗಜೇಂದ್ರ ಎನ್ನುವ ರೈತ ಮನೆ ಕಟ್ಟುವ ಸಲುವಾಗಿ 2022 ರಲ್ಲಿ 4.80 ಲಕ್ಷ ಸಾಲ ಪಡೆದು ಪ್ರತಿ ತಿಂಗಳು 11 ಸಾವಿರದಂತೆ 31 ತಿಂಗಳು ಮರುಪಾವತಿ ಮಾಡಿದ್ದಾರೆ. ರೈತನಿಗೆ ಸರಿಯಾದ ಮಾಹಿತಿ ನೀಡದೇ ಸಾಲ ನೀಡಿ, ಕಟ್ಟಿದ ಸಾಲದಲ್ಲಿ ಶೇ.21 ರಷ್ಟು ಬಡ್ಡಿ ಪಡೆದು ಸಾಲ ಬಾಕಿ ಉಳಿದಿದೆ ಎಂದು ಹೇಳುತ್ತಾರೆ. ಮನೆ ಬಳಿ ಹೋಗಿ ಹಿಂಸೆ ಮಾಡುತ್ತಿದ್ದಾರೆ. ಅವರ ವಿರುದ್ಧ ಠಾಣೆಗೆ ದೂರು ನೀಡಲಾಗುತ್ತದೆ ಎಂದರು.

ನೀಡಿದ ಸಾಲಕ್ಕೆ ಆರ್​ಬಿಐ ಕಾನೂನಿನ ಅಡಿಯಲ್ಲಿ ಇರುವ ಬಡ್ಡಿಯನ್ನು ಕಟ್ಟಲು ಸಿದ್ಧರಿದ್ದೆವೆ. ಹೆಚ್ಚಿನ ಬಡ್ಡಿಯನ್ನು ಕಟ್ಟಲು ಸಾಧ್ಯವಿಲ್ಲ. ಈಗಾಗಲೇ 3.80 ಲಕ್ಷ ಸಾಲವನ್ನು ಕಟ್ಟಲಾಗಿದೆ. ಉಳಿದ ಹಣದ ಜತೆ ಬ್ಯಾಂಕ್ ಬಡ್ಡಿಯನ್ನು ಸೇರಿಸಲು ಸಿದ್ಧರಿದ್ದೇವೆ. ಸರ್ಕಾರ ಮೈಕ್ರೋ ಫೈನಾನ್ಸ್ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಿದರೂ ಫೈನಾನ್ಸ್​ನವರ ಕಾಟ ಸಾಲಗಾರಿಗೆ ತಪ್ಪಿಲ್ಲ. ರೈತರನ್ನು ಹಿಂಸೆ ಮಾಡುವುದು, ಮನೆಯ ಬಳಿ ಹೋಗಿ ತೊಂದರೆ ನೀಡುವುದು ಮಾಡಿದರೆ ರೈತಸಂಘ ಸುಮ್ಮನೇ ಕೂರುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀಂವುಲ್ಲಾ, ರಾಜ್ಯ ಕಾರ್ಯದರ್ಶಿ ಚನ್ನಬಸಪ್ಪ, ಬಸವರಾಜ್, ಶಂಕರ್ ದೇವರಹಳ್ಳಿ, ಜಕ್ಕಲಿನಾಗರಾಜ್, ದಾವಣಗೆರೆ ಗಣೇಶ್, ಶ್ರೀನಿವಾಸ್ ಇದ್ದರು.

Share This Article

ಒಂದು ದಿನಕ್ಕೆ ಒಬ್ಬರು ಎಷ್ಟು ಸಿಹಿ ತಿನ್ನಬೇಕು? ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳೊದೇನು? ಇಲ್ಲಿದೆ ಮಾಹಿತಿ..| WHO

WHO: ನೀವು ಪ್ರತಿದಿನ ಸಿಹಿ ತಿನ್ನುತ್ತಿದ್ದೀರಾ? ದಿನಂಪ್ರತಿ ಸಿಹಿತಿಂಡಿಗಳು-ಚಾಕಲೇಟ್​ ಸೇರಿದಂತೆ ಸಿಹಿ ಪಾನೀಯಗಳು ಸೇವನೆಯ ಅಭ್ಯಾಸವು…

ಅಡುಗೆಮನೆಯಲ್ಲಿ ಈ ಫೋಟೋವನ್ನು ಇಟ್ಟರೆ, ಮನೆಯಲ್ಲಿ ಅದೃಷ್ಟ, ಸಂಪತ್ತು ಸದಾ ತುಂಬಿರುತ್ತದಂತೆ! Vastu Tips

Vastu Tips: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ವಾಸ್ತು ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು…

ಫ್ರಿಡ್ಜ್​​​ನಲ್ಲಿಟ್ಟ ಮಾಂಸ ತಿನ್ನುತ್ತಿದ್ದೀರಾ? ನೀವು ಇದನ್ನು ಖಂಡಿತ ತಿಳಿದುಕೊಳ್ಳಬೇಕು..meat

meat: ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ರೆಫ್ರಿಜರೇಟರ್‌ಗಳು ಅತ್ಯಗತ್ಯವಾಗಿರುತ್ತವೆ. ಪ್ರತಿಯೊಂದು ವಸ್ತುವನ್ನು ಫ್ರಿಡ್ಜ್‌ನಲ್ಲಿ ಇಡುವುದನ್ನು ಅವರು…