ಅನ್ನಾಹಾರ ಇಲ್ಲದೆ ಬದುಕು ಅಸಾಧ್ಯ

blank

ಪಾಂಡವಪುರ: ಚಿನ್ನ, ಬೆಳ್ಳಿ, ಬಂಗಾರ ಇಲ್ಲದೆ ಮನುಷ್ಯ ಬದುಕಬಹುದು ಆದರೆ ಅನ್ನ, ಆಹಾರ ಇಲ್ಲದೆ ಬದಕಲು ಸಾಧ್ಯವೇ ಇಲ್ಲ ಎಂದು ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ನುಡಿದರು.

blank

ಪಟ್ಟಣದ ಕಸಾಪ ಭವನದಲ್ಲಿ ತಾಲೂಕು ಕಸಾಪ ಮತ್ತು ಗ್ರಾಮ ರಂಗ ಸಾಂಸ್ಕೃತಿಕ ವೇದಿಕೆ ಇತ್ತೀಚೆಗೆ ಆಯೋಜಿಸಿದ್ದ ಸ್ವಾಮೀಜಿ ಅವರ ಪುರ ಪ್ರವೇಶ ಮತ್ತು ಸಂಕ್ರಾತಿ ಪುರಸ್ಕಾರ ಸಮಾರಂಭವನ್ನು ರಾಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆ ಬೆಳೆದಂತೆ ಮನುಷ್ಯ ತನ್ನ ಸ್ವಭಾವವನ್ನು ಬದಲಾಯಿಸಿಕೊಳ್ಳುತ್ತಾ ಬಂದಿದ್ದಾನೆ. ಹಿಂದೆ ಸಂಕ್ರಾತಿ ಹಬ್ಬ ಎಂದರೆ ಸಡಗರ, ಸಂಭ್ರಮ, ಹೊಸತನ, ಸಹೋದರತ್ವ, ಸಹಬಾಳ್ವೆ, ಸಹಭೋಜನ ಎಲ್ಲವೂ ಇತ್ತು. ದನ, ಕರುಗಳಿಗೆ ಪೂಜೆ ಸಲ್ಲಿಸಿ ಸಂಜೆ ಕಿಚ್ಚು ಹಾಯಿಸುತ್ತಿದ್ದರು. ಎಳ್ಳು-ಬೆಲ್ಲ ಹಂಚುವ ಮೂಲಕ ಹಬ್ಬಕ್ಕೆ ಮೆರುಗು ನೀಡುತ್ತಿದ್ದರು. ಆದರೆ ಕಾಲ ಕಳೆದಂತೆ ಹಬ್ಬದ ಮಹತ್ವ ಕಳೆದುಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಕ್ರಾಂತಿ ಸಮಯದಲ್ಲಿ ರೈತನ ಮನೆಯಲ್ಲಿ ಭತ್ತ, ರಾಗಿ, ದವಸ ಧಾನ್ಯಗಳು ರಾಶಿ, ರಾಶಿ ಕಾಣ ಸಿಗುತ್ತಿದ್ದವು. ಇಂದು ರೈತ ಹುಟ್ಟುಹಬ್ಬ, ಮದುವೆ ಮುಂತಾದ ಸಮಾರಂಭಗಳನ್ನು ಆಡಂಬರದಿಂದ ಆಚರಿಸಿ ಸಾಲದ ಸುಳಿಗೆ ಸಿಲುಕಿಕೊಳ್ಳುತ್ತಿದ್ದಾನೆ. ಹೀಗಾಗಿ ಕಸಾಪದಂತಹ ಸಂಘಟನೆಗಳು ಕುವೆಂಪು ಅವರ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಸರಳ ವಿವಾಹ ಅಳವಡಿಸಿಕೊಳ್ಳುವಂತೆ ಉತ್ತೇಜಿಸುವ ಕೆಲಸ ಮಾಡಬೇಕು. ಅದ್ದೂರಿತನಕ್ಕಿಂತ ಸರಳತೆಗೆ ಮಾನ್ಯತೆ ನೀಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ಕೇಂದ್ರೀಕರಿಸಬೇಕು. ಇದಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದು ಸಭೆಯಲ್ಲಿ ಸಂಕಲ್ಪ ಮಾಡಿಸಿದರು.
ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲಿ ಪಸರಿಸಿದ ಧೀರ ಸನ್ಯಾಸಿ. ಅವರ ಜನುಮ ಮತ್ತು ಸಂಕ್ರಾತಿಯ ಶುಭ ದಿನದಲ್ಲಿ ನನ್ನನ್ನು ಪ್ರೀತಿಯಿಂದ ಪಾಂಡವಪುರಕ್ಕೆ ಕರೆ ತಂದಿದ್ದೀರಿ. ಪಾಂಡವಪುರದ ಜನ ಯಾವಾಗ ಕರೆದರೂ ಸಂತೋಷದಿಂದ ಭಾಗವಹಿಸುತ್ತೇನೆ ಎಂದು ತಿಳಿಸಿದರು.
ಬಳಿಕ ಸ್ವಾಮೀಜಿಗಳಿಗೆ ಫಲ-ತಾಂಬೂಲ ನೀಡಿ ಗೌರವಿಸಲಾಯಿತು. ಬಳಿಕ ನರೆದಿದ್ದ ಸಾರ್ವಜನಿಕರು ಪಾದ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.

ಇದೇ ವೇಳೆ ಉತ್ತಮ ರಾಸುಗಳನ್ನು ಸಾಕಿರುವ ಹಾರೋಹಳ್ಳಿ ಬಸವರಾಜು ಹಾಗೂ ಬೇವಿನಕುಪ್ಪೆ ಗ್ರಾಮ ನಡಕೇರಿಗೌಡ ಅವರಿಗೆ ಸಂಕ್ರಾತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಮೇನಾಗರ ಪ್ರಕಾಶ್, ಮಾಜಿ ಅಧ್ಯಕ್ಷರಾದ ಹಾರೋಹಳ್ಳಿ ಎಚ್.ಆರ್.ಧನ್ಯಕುಮಾರ್, ಬೀರಶೆಟ್ಟಹಳ್ಳಿ ರಮೇಶ್, ಸಾಹಿತಿ ಚಂದ್ರಶೇಖರಯ್ಯ, ನಾಗಲಿಂಗೇಗೌಡ ಇತರರು ಇದ್ದರು.

 

Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…