ಮಮದಾಪುರ: ಮಾನವನ ಬದುಕು ಬಂಗಾರವಾಗಲು ಗುರುವಿನ ಆಶೀರ್ವಾದ ಬಲು ಮುಖ್ಯ ಎಂದು ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುರಾಜೇಂದ್ರ
ಸ್ವಾಮೀಜಿ ಹೇಳಿದರು.

ಗ್ರಾಮದ ಚರಮೂರ್ತಿಶ್ವರ ಮಹಾಮಠದ ಮೇ 5ರ ಜಾತ್ರಾ ಮಹೋತ್ಸವ ಪ್ರಯುಕ್ತ ಚರಮೂರ್ತಿಶ್ವರ ಮಹಾಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮೋ ಪ್ರಾಪ್ತಿಗೆ ಸದ್ಗುರುವಿನ ಮಾರ್ಗ-ದ-ರ್ಶ-ನ ಬಹಳ ಮುಖ್ಯವಾಗಿದೆ. ಇಂತಹ ಪ್ರವಚನ ಕಾರ್ಯಕ್ರಮದಲ್ಲಿನ ಸದ್ಗುರುಗಳ ಮಾರ್ಗದರ್ಶನದಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಯುತ್ತದೆ. ಮಠದಲ್ಲಿ ಒಂದು ತಿಂಗಳವರೆಗೆ ಜರುಗುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಹೆಚ್ಚು ಭಕ್ತರು ಆಗಮಿಸಬೇಕು ಎಂದು ತಿಳಿಸಿದರು.
ಮಠದ ಡಾ.ಸಿದ್ದಲಿಂಗ ದೇವರು ಮಾತನಾಡಿದರು. ಬಳಿಕ ಡಾ. ಸಿದ್ದಲಿಂಗ ದೇವರು ಡಾ. ಶಿವಲಿಂಗ ಮುರುರಾಜೇಂದ್ರ ಸ್ವಾಮೀಜಿ ಅವರನ್ನು ಸತ್ಕರಿಸಿ ಸನ್ಮಾನಿಸಿದರು. ಚರಮೂರ್ತಿಶ್ವರ ಸ್ವಾಮೀಜಿ, ಈರಯ್ಯ ಸ್ವಾಮೀಜಿ ಹಾಗೂ ಮಠದ ಸದ್ಭಕ್ತ
ಮಂಡಳಿಯವರು ಪಾಲ್ಗೊಂಡಿದ್ದರು.