ಬಡವರ ಮಕ್ಕಳ ವ್ಯಾಸಂಗಕ್ಕೆ ನೆರವಾಗಲಿ

blank

ರಾಮದುರ್ಗ: ಹಳೇ ವಿದ್ಯಾರ್ಥಿಗಳು ಇಳಿ ವಯಸ್ಸಿನ ಗುರುಗಳನ್ನು ಗೌರವಿಸಿ ಸಂಭ್ರಮಿಸುವುದು ಹೆಮ್ಮೆಯಾಗಿದೆ. ಅವರೆಲ್ಲ ಒಂದಾಗಿ ಬಡವರ ಮಕ್ಕಳ ವ್ಯಾಸಂಗಕ್ಕೆ ಸಹಾಯ ಮಾಡುವ ಯೋಜನೆ ಹಾಕಿಕೊಳ್ಳಬೇಕು ಎಂದು ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಟಿ. ದಾಮೋದರ ಹೇಳಿದರು.

ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಸಿಡಿ ಹಲ್ಯಾಳ ಪ್ರೌಢಶಾಲೆಯ 2000ದಿಂದ 2003ನೇ ಬ್ಯಾಚಿನ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ಎಸ್. ಜೋಗಳೆ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ನಿವತ್ತ ಮುಖ್ಯಶಿಕ್ಷಕ ವಿ.ಜಿ. ಬಳಿಗೇರ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕರಾದ ಎನ್.ಜಿ. ಹುದ್ದಾರ, ಎಚ್.ಪಿ. ಶೇಷಪ್ಪನವರ, ಎಸ್.ಡಿ ಅರವಟಗಿ, ಎಸ್.ಆರ್. ಪುರುಷಾಕಾರಿ, ವಿ.ಬಿ. ಜಂಬಗಿ, ಪಿ.ಬಿ. ಪೂಜಾರ, ಐ.ಬಿ. ಕೋನಿಮನಿ, ಎನ್.ಬಿ. ಜಾಲಿಹಾಳ, ಎಸ್.ಎಸ್. ಶೆಟ್ಟರ ಸೇರಿ ಇತರರನ್ನು ಸತ್ಕರಿಸಲಾಯಿತು. ಮುಜಾರ್ ಗಡ್ಡಿ, ಅಶ್ವಿನಿ ಕರಜಗಾರ, ಎಸ್.ಎಲ್. ಪೆಟ್ಲೂರ, ಇಲಿಹಾಸ್ ಬಹದ್ದೂರಖಾನ್, ಮಂಜು ಕೊಳದೂರ, ಎಂ.ಸಿ. ಮುಳಗುಂದ ಇತರರಿದ್ದರು.

Share This Article

ಕೇವಲ 2 ಚಮಚ ಉಪ್ಪು ಇದ್ದರೆ ಸಾಕು ಮನೆಗೆ ಇರುವೆ, ಜಿರಳೆ ಬರದಂತೆ ತಡೆಯಬಹುದು..| Salt

Salt: ಉಪ್ಪು ಅಡಿಗೆಗೆ ರುಚಿಯನ್ನು ಮಾತ್ರ ನೀಡುವುದಿಲ್ಲ, ಅದು ನಿಮ್ಮ ಅಡುಗೆ ಮನೆಯ ಸ್ವಚ್ಛತೆಗೂ ಸಹಾಯ…

ಜಸ್ಟ್​ ಈ ಸಣ್ಣ ಕೆಲಸ ಮಾಡಿ… ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಿ! Glowing Skin

Glowing Skin : ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಬಯಸುತ್ತಾರೆ. ಆದರೆ, ಪ್ರಸ್ತುತ ಕಾಲದಲ್ಲಿ,…

ಸಾಧನೆ ಸಂಭ್ರಮಿಸೋಣ ಸೇವೆಗೆ ಅಣಿಯಾಗೋಣ

ಮೊನ್ನೆಯಷ್ಟೇ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಬಂದಿತು. ಈ ಫಲಿತಾಂಶ ತಂದ ಸಂತಸ ಮತ್ತು ಸಂದೇಶ…