ಕರ್ನಾಟಕ ವಿವಿ ವಿವಾದಿತ ಪಠ್ಯ ಹಿಂಪಡೆಯಲಿ: ಅರುಣ ಶಹಪುರ, ಕಾರ್ಣಿಕ್ ಆಗ್ರಹ | State govt intervene must

blank

ಬೆಂಗಳೂರು: ಸಂವಿಧಾನ ವಿರೋಧಿ, ಸಮಾಜ ವಿಘಟಕ ಹಾಗೂ ಯುವ ಮನಸ್ಸುಗಳನ್ನು ವಿಕೃತಗೊಳಿಸುವ ಅಂಶಗಳು ಕರ್ನಾಟಕ ವಿಶ್ವ ವಿದ್ಯಾಲಯದ ಬಿ ಎ ಮೊದಲ ಸೆಮಿಸ್ಟರ್ ಪಠ್ಯದಲ್ಲಿದ್ದು, ತಕ್ಷಣವೇ ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ ಶಹಪುರ ಹಾಗೂ ಗಣೇಶ್ ಕಾರ್ಣಿಕ್ ಆಗ್ರಹಿಸಿದರು.

ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಎಲ್ಲ ವಿಶ್ವ ವಿದ್ಯಾಲಯಗಳ ಪಠ್ಯಕ್ರಮಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕು. ರಾಜ್ಯಪಾಲರು ಈ ಕುರಿತು ಕ್ರಮಕೈಗೊಂಡ ವರದಿ ತರಿಸಿಕೊಳ್ಳಬೇಕು ಎಂದು ಕೋರಿದರು.

ವಿ.ವಿ.ಯ 2000ರ ಕಾಯ್ದೆ ಪ್ರಕಾರ ವಿ.ವಿ.ಗಳ ಅವಲೋಕನ ಆಯೋಗವನ್ನು ಪ್ರತಿ ಐದು ವರ್ಷಗಳಿಗೊಮ್ಮೆ ರಚಿಸಿ ಅವಲೋಕನ ಮಾಡಬೇಕೆಂದಿದೆ. ಇಂತಹ ಆಯೋಗಗಳು ಸಲ್ಲಿಸಿದ ವರದಿಯನ್ನು ಬಹಿರಂಗಪಡಿಸಬೇಕು ಅಥವಾ ಅವಲೋಕನ ಆಯೋಗಗಳನ್ನು ರಚಿಸಬೇಕು ಎಂದು ಸರ್ಕಾರದ ಮುಂದೆ ಅರುಣ ಶಹಪುರ ಬೇಡಿಕೆಯಿಟ್ಟರು.

ಮೌನ ಕಳವಳ

ಪಾಠ ಪೂರ್ತಿ ವಿವಾದಿತ ಅಂಶಗಳು, ದೇಶದ ಏಕತೆ, ಸಮಗ್ರತೆಯ ಅಸ್ತಿತ್ವ ಅಲುವಾಡಿಸುವ ಅಂಶಗಳು ಈ ಪಾಠದಲ್ಲಿವೆ. ಆದರೆ ಬಿಎ ಮೊದಲ ಸೆಮಿಸ್ಟರ್ ಬೆಳಗು ಕನ್ನಡ ವಿಷಯದ ಪಠ್ಯದಲ್ಲಿ ಈ ಪಾಠ ಸೇರಿಕೊಂಡಿದ್ದು, ವಿವಿಗಳ ಅಧ್ಯಯನ ಮಂಡಳಿ ಪರಿಶೀಲಿಸಿಲ್ಲ ಎನ್ನುವುದು ದೃಢಪಡುತ್ತದೆ.

ಪಠ್ಯದಲ್ಲಿ ಸೇರಿಸಲಾದ ‘ರಾಷ್ಟ್ರೀಯ ವಾದದ ಸುತ್ತಮುತ್ತ’ ಪಾಠದ ಲೇಖಕರು ರಾಮಲಿಂಗಪ್ಪ ಟಿ.ಬೇಗೂರು ಅವರಾಗಿದ್ದು, ಸಂವಿಧಾನಕ್ಕೆ ವಿರುದ್ಧವಾದ ಅಂಶಗಳಿರುವ ಕಾರಣ ಅವರ ವಿರುದ್ಧ ಕ್ರಿಮಿನಲ್ ದಾವೆ ಹೂಡಬೇಕಾಗುತ್ತದೆ.

ಅತ್ಯಂತ ವಿವಾದಪೂರಿತ ಪಾಠದ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗುತ್ತಿದ್ದರೂ ರಾಜ್ಯದ ಉನ್ನತ ಶಿಕ್ಷಣ ಪರಿಷತ್ ಮೌನಕ್ಕೆ ಶರಣಾಗಿರುವುದು ಮತ್ತಷ್ಟು ಕಳವಳ ಹೆಚ್ಚಿಸಿದೆ. ದೇಶದ ಏಕತೆ, ಬಹುತ್ವ, ಹಿಂದುತ್ವ, ಭಾರತ ಮಾತೆ ಮತ್ತು ಕನ್ನಡಾಂಬೆಡೆಗೆ ಅಪಮಾನಿಸಲಾಗಿದೆ.

ಬಹುಸಂಖ್ಯಾತರ ಹಿಂಸಾವಾದಿಗಳು, ಅಸಹಿಷ್ಣುಗಳು, ಭಾರತ ಮಾತಾ ಕೀ ಜೈ ಎನ್ನುವುದು ಸೋಲು ಒಪ್ಪಿಕೊಂಡಂತೆ, ವಿವಿಧತೆಯಲ್ಲಿ ಏಕತೆಯು ಅನಿವಾರ್ಯದ ಹೊಂದಾಣಿಕೆ ಹೀಗೆ ಯುವ ಜನರಿಗೆ ತಪ್ಪು ಸಂದೇಶ ನೀಡುವ ಅಂಶಗಳು ಈ ಪಠ್ಯದಲ್ಲಿದ್ದು, ಲೇಖಕರ ಮನಸ್ಥಿತಿ ಬಗ್ಗೆಯೂ ಪ್ರಶ್ನಾರ್ಹ ಎಂದೂ ಹೇಳಿದರು.

ರಾಜ್ಯ ಸರ್ಕಾರ ಈ ವಿಷಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ಕಾರ್ಯತಂತ್ರದ ಬಗ್ಗೆ ಬಿಜೆಪಿ ವೇದಿಕೆಯಲ್ಲಿ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಅರುಣ ಶಹಪುರ ಹಾಗೂ ಗಣೇಶ್ ಕಾರ್ಣಿಕ್ ಪ್ರತಿಕ್ರಿಯಿಸಿದರು.

Share This Article

ಐಸ್​​ಕ್ಯೂಬ್​​ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ! ತಜ್ಞರು ಏನು ಹೇಳುತ್ತಾರೆ? Ice cube Remedy

Ice cube Remedy : ಮುಖ ಸುಂದರವಾಗಿ ಕಾಣಲು ಅನೇಕ ಜನರು ವಿವಿಧ ಸಲಹೆಗಳನ್ನು ಅನುಸರಿಸುತ್ತಾರೆ.…

ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು  ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…