ಕಾಲು ಜಾರಿ ಬಿದ್ದ ಸಿದ್ದರಾಮಯ್ಯ; ಅಪಘಾತದಲ್ಲಿ ಗಾಯಗೊಂಡಿದ್ದವರ ಭೇಟಿಗೆ ಬಂದಿದ್ದಾಗ ಘಟನೆ..

ಬಾಗಲಕೋಟೆ: ಸಿದ್ದರಾಮೋತ್ಸವಕ್ಕೆ ಆಗಮಿಸುತ್ತಿದ್ದಾಗ ಅಪಘಾತಕ್ಕೀಡಾಗಿ ಗಾಯಗೊಂಡಿದ್ದವರನ್ನು ಭೇಟಿಯಾಗಲು ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಾಲು ಜಾರಿ ಕುಸಿದು ಬಿದ್ದ ಘಟನೆ ನಡೆದಿದೆ. ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆ ಮುಂದೆ ಈ ಘಟನೆ ನಡೆದಿದೆ. ಆಗಸ್ಟ್​ 2ರಂದು ಸಿದ್ದರಾಮೋತ್ಸವಕ್ಕೆ ಹೊರಟ ವಾಹನ ಅಪಘಾತಕ್ಕೀಡಾಗಿ ಗಾಯಗೊಂಡಿದ್ದವರ ಯೋಗಕ್ಷೇಮ ವಿಚಾರಿಸಲು ಸಿದ್ದರಾಮಯ್ಯ ಆಗಮಿಸಿದ್ದರು. ಸಿದ್ದರಾಮಯ್ಯ ಅವರು ಡ್ರೈವರ್ ಪಕ್ಕದ ಡೋರ್​ನಲ್ಲಿ ನಿಂತು ಅಭಿಮಾನಿಗಳತ್ತ ಕೈಬೀಸುವಾಗ ಕಾಲು ಜಾರಿ ಕುಸಿದು ಬಿದ್ದಿದ್ದರು. ಅವರು ಬೀಳುತ್ತಿದ್ದಂತೆ ಅಂಗರಕ್ಷಕರು ಅವರನ್ನು ಹಿಡಿದು ಎಬ್ಬಿಸಿ ಕಾರಲ್ಲಿ‌ ಕೂರಿಸಿದರು. … Continue reading ಕಾಲು ಜಾರಿ ಬಿದ್ದ ಸಿದ್ದರಾಮಯ್ಯ; ಅಪಘಾತದಲ್ಲಿ ಗಾಯಗೊಂಡಿದ್ದವರ ಭೇಟಿಗೆ ಬಂದಿದ್ದಾಗ ಘಟನೆ..