ಬೆಳಗಾವಿ: ದಿ.ಡಾ.ಶ್ರೀಕಾಂತ ಜಿಚ್ಕರ್ ಅವರಿಂದ ಸ್ಫೂರ್ತಿ ಪಡೆದು ಡಾ. ಜಗನ್ನಾಥ ದೀತ್ ಪ್ರಾರಂಭಿಸಿದ ಬೊಜ್ಜು ಹಾಗೂ ಸಕ್ಕರೆ ಕಾಯಿಲೆ ಮುಕ್ತ ಅಭಿಯಾನದ ಭಾಗವಾಗಿ ಡಾ.ಜಗನ್ನಾಥ ಮೇ 17ರಂದು ಸಂಜೆ 5.30ಕ್ಕೆ ಶಹಾಪುರದ ಗೋವಾವೇಸ್ನ ಲೇಕ್ ವ್ಯೂ ಆಸ್ಪತ್ರೆ ಬಳಿ ಇರುವ ಚಿದಂಬರ ರಾಜಾರಾಮ್ ಮಹಾರಾಜ್ ಮತ್ತು ಪಾಂಡುರಂಗ ಮಹಾರಾಜ್ ಸಮಾಧಿ ಮಠದ ಸಭಾಂಗಣದಲ್ಲಿ ಉಪನ್ಯಾಸ ನಡೆಯಲಿದೆ. ಚಿದಂಬರದಾಸ ರಾಜಾರಾಂ ಮಹಾರಾಜ್ ಮತ್ತು ಪಾಂಡುರಂಗ ಮಹಾರಾಜ ಸಮಾಧಿ ಮಂದಿರ ಸಮಿತಿ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಉಪನ್ಯಾಸವು ಮರಾಠಿಯಲ್ಲಿ ನಡೆಯಲಿದ್ದು, ಎಲ್ಲರಿಗೂ ಮುಕ್ತವಾಗಿದೆ. ಮೇ 18ರಂದು ಬೆಳಗ್ಗೆ 10ಗಂಟೆಗೆ ಡಾ. ಜಗನ್ನಾಥ ದೀತ್ ಸಕ್ಕರೆ ಕಾಯಿಲೆ ಮತ್ತು ಬೊಜ್ಜು ಮುಕ್ತಿ ಕೇಂದ್ರ ಹಾಗೂ ಸಲಹಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ಟಿಳಕವಾಡಿಯ ಗೋಡ್ಸೆವಾಡಿಯ 1ನೇ ಕ್ರಾಸ್, ಜೈಗಣೇಶ್ನ ವಿಶಾಲ್ ಇನಾಬಿಲ್ಡ್ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
