ಮಂಗಳವಾಡದಲ್ಲಿ ಲಕ್ಷ್ಮೀ ದೇವಿ ಮಹಾರಥೋತ್ಸವ ಸಂಭ್ರಮ

blank

ಹಳಿಯಾಳ: ತಾಲೂಕಿನ ಮಂಗಳವಾಡದ ಗ್ರಾಮದೇವಿ ಲಕ್ಷ್ಮೀ (ದ್ಯಾಮವ್ವ ) ದೇವಿ ಮಹಾರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು. 8 ಟನ್​ಗಿಂತ ಅಧಿಕ ಭಾರವುಳ್ಳ, 70 ಅಡಿ ಎತ್ತರದ ಹಾಗೂ 7 ಅಂಕಣವಿರುವ ನಾಲ್ಕೂ ದಿಕ್ಕಿಗೂ ಹಲವು ದೇವರ, ಇತಿಹಾಸ ಪ್ರಸಿದ್ಧ ಪವಾಡ ಪುರುಷರು, ರಾಜ ಮಹಾರಾಜರ ಬೃಹತ್ ಫ್ಲೆಕ್ಸ್​ಗಳು ನೋಡುಗರ ಗಮನ ಸೆಳೆಯುತ್ತಿದ್ದವು.

ಭವ್ಯವಾದ ರಥದಲ್ಲಿ ಗ್ರಾಮದೇವಿಯರ ನೂತನ ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ರಥೋತ್ಸವಕ್ಕೆ ಬೆಂಗಳೂರಿನ ಗೋಸಾಯಿ ಮಠದ ಭವಾನಿ ದತ್ತಪೀಠದ ಮರಾಠಾ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥಭಾರತೀ ಮಹಾಸ್ವಾಮೀಜಿಗಳು ಚಾಲನೆ ನೀಡಿದರು. ಸಿದ್ಧಹಂಡಿ ಬಡಗನಾಥದ ಮೋಹನ ದಾಸಜಿ ಮಹಾರಾಜರು ಇದ್ದರು.

ಜಗ್ಗಲಿಗೆ, ಧಾರ್ವಿುಕ ವೇಷಭೂಷಣ, ಚಂಡೆ ವಾದ್ಯ, ಡೊಳ್ಳು ಕುಣಿತ ರಥೋತ್ಸವಕ್ಕೆ ಮೆರುಗು ತಂದವು. ವಾದ್ಯಗಳ ಲಯಕ್ಕೆ ತಕ್ಕಂತೆ ಸಾವಿರಾರು ಯುವಕ-ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.

Share This Article

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…