ರಸ್ತೆ ಅಭಿವೃದ್ಧಿ ವಿಚಾರವಾಗಿ ಕಾಂಗ್ರೆಸ್​ ಶಾಸಕಿಯ ಮುಂದೆಯೇ ಕಿತ್ತಾಡಿಕೊಂಡ ಕೈ ಮುಖಂಡರು

ಹುಬ್ಬಳ್ಳಿ: ರಸ್ತೆ ಅಭಿವೃದ್ಧಿ ವಿಚಾರವಾಗಿ ಶಾಸಕಿಯ ಮುಂದೆಯೇ ಕಾಂಗ್ರೆಸ್​ ಮುಖಂಡರು ಕಿತ್ತಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ನಡೆದಿದೆ. ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ‌ ಮುಂದೆಯೇ ಕೈ ಮುಖಂಡರು ಕಿತ್ತಾಡಿಕೊಂಡಿದ್ದಾರೆ. ಗುಡಗೇರಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡೋಕೆ ಕೈ ಶಾಸಕಿ ಕುಸುಮಾವತಿ ಬಂದಾಗ ಘಟನೆ ನಡೆದಿದೆ. ನಾನು ಗುದ್ದಲಿ ಪೂಜೆ ಮಾಡೋಕೆ ಬಿಡಲ್ಲ, ಗುತ್ತಿಗೆದಾರರನ್ನು ಕರೆಸಿ ಎಂದು ಕೈ ಮುಖಂಡನೊಬ್ಬ ಧ್ವನಿ ಏರಿಸಿದಾಗ, ಬಾಯಿ ಜೋರು ಮಾಡಬೇಡಿ ಎಂದು ಮತ್ತೊಬ್ಬ ಮುಖಂಡ ವಾಗ್ವಾದಕ್ಕೆ ಇಳಿದ. … Continue reading ರಸ್ತೆ ಅಭಿವೃದ್ಧಿ ವಿಚಾರವಾಗಿ ಕಾಂಗ್ರೆಸ್​ ಶಾಸಕಿಯ ಮುಂದೆಯೇ ಕಿತ್ತಾಡಿಕೊಂಡ ಕೈ ಮುಖಂಡರು