ಹರಾಜಿನಲ್ಲಿ ರಥದ ನಂದಿಧ್ವಜ ಗೆದ್ದವರು ಶಾಸಕರಾಗ್ತಾರೆಂಬ ನಂಬಿಕೆ: 16 ಲಕ್ಷಕ್ಕೆ ಧ್ವಜ ಖರೀದಿಸಿದ ಕುಣಿಗಲ್​ ಶಾಸಕ!

ತುಮಕೂರು: ಹರಾಜಿನಲ್ಲಿ ನಂದಿಧ್ವಜ ಗೆದ್ದವರು ಶಾಸಕರಾಗುತ್ತಾರೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕುಣಿಗಲ್​ನ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಹಾಲಿ ಶಾಸಕ ಡಾ. ರಂಗನಾಥ್​ ಅವರು ನಂದಿಧ್ವಜವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕುಣಿಗಲ್ ತಾಲ್ಲೂಕಿನ ಕಗ್ಗೆರೆಯಲ್ಲಿರುವ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ನಂದಿ ಧ್ವಜದ ಹರಾಜು ನಡೆಯಿತು. ಕಾಂಗ್ರೆಸ್​ನ ಮಾಜಿ ಶಾಸಕ ರಾಮಸ್ವಾಮಿಗೌಡ ಹಾಗೂ ಹಾಲಿ ಶಾಸಕ ಡಾ.ರಂಗನಾಥ್ ನಡುವೆ ಧ್ವಜಕ್ಕಾಗಿ ಭಾರೀ ಪೈಪೋಟಿ ನಡೆಯಿತು. ಇದನ್ನೂ ಓದಿ: ರಾಜಕೀಯ ನಿವೃತ್ತಿ ಘೋಷಿಸಿದ ತನ್ವೀರ್ ಸೇಠ್; ಮನನೊಂದು ಪ್ರಾಣ … Continue reading ಹರಾಜಿನಲ್ಲಿ ರಥದ ನಂದಿಧ್ವಜ ಗೆದ್ದವರು ಶಾಸಕರಾಗ್ತಾರೆಂಬ ನಂಬಿಕೆ: 16 ಲಕ್ಷಕ್ಕೆ ಧ್ವಜ ಖರೀದಿಸಿದ ಕುಣಿಗಲ್​ ಶಾಸಕ!