ಸ್ಟೇರಿಂಗ್ ಲಾಕ್; ಕಬ್ಬಿನ ಗದ್ದೆಗೆ ನುಗ್ಗಿದ ಕೆಎಸ್​​ಆರ್​ಟಿಸಿ ಬಸ್

ಮಂಡ್ಯ: ಸ್ಟೇರಿಂಗ್ ಲಾಕ್ ಆಗಿ ಕೆಎಸ್​​ಆರ್​ಟಿಸಿ ಬಸ್ ಕಬ್ಬಿನ ಗದ್ದೆಗೆ ನುಗ್ಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಗೇಟ್ ಬಳಿ ನಡೆದಿದೆ. ಬಸ್​ನಲ್ಲಿ ಸುಮಾರು 30ಕ್ಕೂ ಅಧಿಕ ಪ್ರಯಾಣಿಕರು ಇದ್ದರು. ಕೆಎಸ್​ಆರ್​ಟಿಸಿ ಬಸ್ ಮಂಡ್ಯದಿಂದ ಪಾಂಡವಪುರಕ್ಕೆ ತೆರಳುತ್ತಿತ್ತು. ಈ ವೇಳೆ ಕನಗನಮರಡಿ ಗೇಟ್ ಬಳಿ ಬಸ್​ನ ಸ್ಟೇರಿಂಗ್ ಲಾಕ್​ ಆಗಿದೆ. ಈ ವೇಳೆ ಬಸ್ ಚಾಲಕನ ನಿಯಂತ್ರಣದಿಂದ ತಪ್ಪುತ್ತಿದ್ದಂತೆ ಹತ್ತಿರದ ಕಬ್ಬಿನ ಗದ್ದೆಗೆ ನುಗ್ಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಅದೃಷ್ಟವಶಾತ್ … Continue reading ಸ್ಟೇರಿಂಗ್ ಲಾಕ್; ಕಬ್ಬಿನ ಗದ್ದೆಗೆ ನುಗ್ಗಿದ ಕೆಎಸ್​​ಆರ್​ಟಿಸಿ ಬಸ್