More

    ಯುವ ಕ್ಷಾತ್ರ ಕ್ರೀಡೋತ್ಸವ

    ಮಂಗಳೂರು: ಯುವ ಕ್ಷಾತ್ರ ಅಬ್ಬಕ್ಕ ನಾಡು ಉಳ್ಳಾಲ ವತಿಯಿಂದ ರಾಮರಾಜ ಕ್ಷತ್ರಿಯ ಸೇವಾ ಸಂಘದ ಉಳ್ಳಾಲ ತಾಲೂಕು ಘಟಕದ ಸಹಯೋಗದಲ್ಲಿ ಯುವ ಕ್ಷಾತ್ರ ಕ್ರೀಡೋತ್ಸವ ಕೋಟೆಕಾರು ಶೃಂಗೇರಿ ಮಠದ ಆವರಣದಲ್ಲಿ ನಡೆಯಿತು. ಗೋಪಾಲಕೃಷ್ಣ ತೊಕ್ಕೊಟ್ಟು ಹಾಗೂ ಸುಧೀರ್ ಬೇಕಲ್ ದಂಪತಿ ಕ್ರೀಡೋತ್ಸವ ಉದ್ಘಾಟಿಸಿದರು.

    ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ ಮುಂತಾದ ಸ್ಪರ್ಧೆಗಳು ನಡೆದವು. ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್, ಡಾ. ರಾಘವೇಂದ್ರ ಬಿ, ಪ್ರವೀಣ್ ಕೊಡಿಯಾಲ್ಬೈಲ್ ಅತಿಥಿಗಳಾಗಿ ಭಾಗವಹಿಸಿದ್ದರು. ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು ಘಟಕದ ಗೌರವಾಧ್ಯಕ್ಷ ಸೀತಾರಾಮ ಕೊಪ್ಪಲು, ಅಧ್ಯಕ್ಷ ಮಾಧವ ರಾವ್ ಕಿನ್ಯ, ಮಹಿಳಾ ಘಟಕದ ಅಧ್ಯಜ್ಷೆ ಸುಜಾತ ಪ್ರಭಾಕರ್, ಯುವ ಕ್ಷಾತ್ರದ ಗೌರವಾಧ್ಯಕ್ಷ ಅಮಿತ್‌ರಾಜ್ ಬೇಕಲ್, ಅಧ್ಯಕ್ಷ ಅಂಕುಶ್ ಕುಮಾರ್ ಹೂಡೆ, ಕ್ರೀಡಾ ಕಾರ್ಯದರ್ಶಿಗಳಾದ ಶ್ರೀನಿಧಿ, ನಿಶಾನ್, ಸ್ವಾತಿ ಉಪಸ್ಥಿತರಿದ್ದರು.

    ಯೋಗೀಶ್ ಮಲ್ಲಿಗೆಮಾಡು ಸ್ವಾಗತಿಸಿ, ಹರ್ಷಿಣಿ ವಂದಿಸಿದರು. ಚಂದನ್ ಕೋಟೆಕಾರ್ ಮತ್ತು ನಿತಿನ್‌ರಾಜ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts