ಕೂಡ್ಲುವಿನಲ್ಲಿ ಕೋಟೆಯಾರ್ ಸೇವಾಸಂಘ ವಾರ್ಷಿಕ ಮಹಾಸಭೆ

ಮಧೂರು: ರಾಮರಾಜ ಕ್ಷತಿಯ ಯಾನೆ ಕೋಟೆಯಾರ್ ಸೇವಾಸಂಘ ಕಾಸರಗೋಡು ಉಪಸಂಘ ಕೂಡ್ಲು ವಾರ್ಷಿಕ ಮಹಾಸಭೆ ನಿವೃತ್ತ ಎಎಸ್‌ಐ ಪುರುಷೋತ್ತಮ ಕೂಡ್ಲು ನಿವಾಸದಲ್ಲಿ ಉಪಸಂಘದ ಅಧ್ಯಕ್ಷ ಬಿ.ಸತೀಶ ಅಧ್ಯಕ್ಷತೆಯಲ್ಲಿ ಜರುಗಿತು. ಜಿಲ್ಲಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಉದ್ಘಾಟಿಸಿ ಮಾತನಾಡಿ, ಸಮಾಜದ ಅವಶ್ಯಕತೆ ಕುರಿತು ತಿಳಿಸಿದರು. ಕೋಟೆಯಾರ್ ಸಮಾಜದವರನ್ನು ಒಬಿಸಿಯ ಎಸ್‌ಇಬಿಸಿ ಪಟ್ಟಿಗೆ ಸೇರಿಸುವ ಕೆಲಸ 2016ರಿಂದ ಸತೀಶ್ ಮಾಸ್ತರ್ ಮತ್ತಿತರರ ಪ್ರಯತ್ನದ ಫಲವಾಗಿ ಯಶಸ್ಸು ಕಾಣುವ ದಾರಿಯಲ್ಲಿದೆ. ಮುಖ್ಯಮಂತ್ರಿಯವರ ಸಹಿಗಾಗಿ ಕಡತ ಅವರ ಮೇಜಿನ ಮೇಲಿದೆ ಎಂದರು. … Continue reading ಕೂಡ್ಲುವಿನಲ್ಲಿ ಕೋಟೆಯಾರ್ ಸೇವಾಸಂಘ ವಾರ್ಷಿಕ ಮಹಾಸಭೆ