ಡ್ಯಾಂ ವಿಷಯದಲ್ಲಿ ರಾಜಕಾರಣ ಬೇಡ : ಸಿಎಂ

blank

ಕೊಪ್ಪಳ: ತುಂಗಭದ್ರಾ ‌ಜಲಾಶಯವನ್ನು ಟಿಬಿ ಬೋರ್ಡ್ ನಿರ್ವಹಣೆ ಮಾಡುತ್ತದೆ. ಕೇಂದ್ರ ಸರ್ಕಾರ ನೇಮಕ ಮಾಡುತ್ತದೆ. ಅದರಲ್ಲಿ ಆಂಧ್ರ, ತೆಲಂಗಾಣ ಹಾಗೂ ನಮ್ಮ ರಾಜ್ಯದ ಅಧಿಕಾರಿಗಳಿರುತ್ತಾರೆ. ಅವರೇ ನೋಡಿಕೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಗಿಣಿಗೇರಾ ಖಾಸಗಿ‌ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ರಾಜಕೀಯವಾಗಿ ಚರ್ಚಿಸುತ್ತಿದ್ದಾರೆ. ನಾನು ರಾಜಕೀಯ ಮಾತನಾಡಲ್ಲ. ಗೇಟ್ ತುಂಡಾಗಿ‌ ಹೋಗಿದೆ. ಅದರಲ್ಲಿ ರಾಜ್ಯದ ಪಾತ್ರವೇನಿದೆ. ಸದ್ಯ ಇಂಥವರೇ ತಪ್ಪು ಮಾಡಿದ್ದಾರೆಂದು ಹೇಳಲಾರೆ. ನೀರು ಹೋಗುತ್ತಿದೆ. ಉಳಿಸುವ ಕೆಲಸ ಮಾಡೋಣ. ಇನ್ನು 60 ಟಿಎಂಸಿ‌ ನೀರು ಉಳಿಯುತ್ತದೆ. ಆ.15ರ ನಂತರ ಮಳೆ ಆಗುವ ಸಾಧ್ಯತೆ ಇದೆ. ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ‌‌ ನೀಡಿದೆ. ಈ ಬಗ್ಗೆ ನಂಬಿಕೆ ಇಟ್ಟುಕೊಳ್ಳೋಣ. ರೈತರಿಗೆ ತೊಂದರೆ ಆಗದಂತೆ ಕ್ರಮವಹಿಸುತ್ತೇವೆ ಎಂದರು.

ಡ್ಯಾಂ ಬಹಳ ಹಳೆಯದಾಗಿದೆ. ಎಲ್ಲ ಜಲಾಶಯದ ಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ತಂಡ ರಚಿಸಲಾಗಿದೆ. ಬಿಜೆಪಿಯವರಿಗೆ ಗೂಬೆ ಕೂಡಿಸುವುದೇ ಕೆಲಸವಾಗಿದೆ. ನಾವು‌ ಯಾರ ಮೇಲೂ ಗೂಬೆ ಕೂಡಿಸುವುದಿಲ್ಲ ಎಂದು ವಿಪಕ್ಷಗಳ‌ ಟೀಕೆಗೆ ತಿರುಗೇಟು ನೀಡಿದರು.

ರೇಗಿದ ಸಿಎಂ: ಗೇಟ್ ಕಟ್ ಆಗಿದ್ದಕ್ಕೆ ಸರ್ಕಾರವೇ ನೇರ ಹೊಣೆ ಎಂಬ ವಿಪಕ್ಷಗಳ ಆರೋಪಕ್ಕೆ ರೇಗಿದ ಸಿಎಂ, ನಾನು ಹೇಳುವುದನ್ನು ಕೇಳಿ. ಇಲ್ಲದಿದ್ದರೆ ನಾನು ವಾಪಸ್ ಹೋಗುತ್ತೇನೆ ನೋಡಿ ಎಂದು ರೇಗಿದರು.

Share This Article

ನಿಮ್ಮ ಸ್ಮಾರ್ಟ್​ಫೋನ್​ ನಿಮ್ಮ ಫಿಟ್​ನೆಸ್​ ಕೋಚ್​… ಆಶ್ಚರ್ಯವಾಯಿತೇ? ಇಲ್ಲಿದೆ ಅಚ್ಚರಿ ಮಾಹಿತಿ… Smartphone

Smartphone : ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ, 2040ರ…

ಈ ದಿನಾಂಕಗಳಂದು ಜನಿಸಿದವರು ತಮ್ಮ ಬುದ್ಧಿವಂತಿಕೆಯಿಂದಾಗಿ ರಾಯಲ್​ ಲೈಫ್​ ನಡೆಸುತ್ತಾರೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ…

ನೀವು ಬೆಳಿಗ್ಗೆ ತಿಂಡಿಯನ್ನು ತಡವಾಗಿ ತಿನ್ನುತ್ತೀರಾ? ಎಚ್ಚರ..ಈ ಕಾಯಿಲೆ ಬರೋದು ಪಕ್ಕಾ… breakfast

breakfast: ಬೆಳಗಿನ ಉಪಾಹಾರವು ದೇಹಕ್ಕೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಉಪಹಾರವನ್ನು ಬಿಡಬಾರದು. ತಡವಾಗಿ ತಿನ್ನುವುದು…