ಜಲಾಶಯ ವಿಷಯದಲ್ಲಿ ರಾಜಕೀಯ ಬೇಡ, ಸಚಿವ ಶಿವರಾಜ ತಂಗಡಗಿ ಮನವಿ

blank

ಕೊಪ್ಪಳ: ಮುನಿರಾಬಾದ್ ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆ‌ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಅನೇಕರು ಸಲಹೆ ನೀಡುತ್ತಿದ್ದಾರೆ. ಬಿಜೆಪಿ ನಾಯಕರು ಸಲಹೆ ನೀಡಲಿ ಸ್ವೀಕರಿಸುತ್ತೇವೆ. ಅದು ಬಿಟ್ಟು ರಾಜಕೀಯ ಮಾಡಬಾರದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಮುನಿರಾಬಾದ್ ಜಲಾಶಯಕ್ಕೆ ಸೋಮವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಎರಡು ರೀತಿಯಿಂದ ‌ದುರಸ್ಥಿ ಕಾರ್ಯದ ಬಗ್ಗೆ ಚಿಂತನೆ ನಡೆಸಿದ್ದೇವೆ. ಡ್ಯಾಂ ನೀರನ್ನು ಖಾಲಿ ಮಾಡಿ ಹೊಸ ಗೇಟ್ ಅಳವಡಿಸೋದು. ಇಲ್ಲವೇ ನೀರು ಖಾಲಿಯಾಗದಂತೆ ನೋಡಿಕೊಂಡು ನೀರಲ್ಲಿಯೇ ಹೊಸ ಗೇಟ್ ಅಳವಡಿಸೋದು. ನೀರು ಇರುವಾಗಲೇ ದುರಸ್ತಿ ಗಾಗಿ ಈಗಾಗಲೇ‌ ಗೇಟ್ ರಡಿಯಾಗುತ್ತಿದೆ. ಹೊಸಪೇಟೆಯಲ್ಲಿ ಗೇಟ್ ಮಾಡೋ ಕೆಲಸವಾಗುತ್ತಿದೆ. ಅನೇಕ ತಜ್ಞರು ಈಗಾಗಲೇ ಡ್ಯಾಮ ಗೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆಂದರು.

ಸಿಎಂ ಕೂಡಾ ಪ್ರತಿನಿತ್ಯ ಮೂರು ಸಲ ಮಾಹಿತಿ ಪಡೆಯುತ್ತಿದ್ದಾರೆ. ಡ್ಯಾಂ ಸುರಕ್ಷಿತೆ ಮತ್ತು ರೈತರ ಹಿತ ಕಾಪಾಡಲು ಬೇಕಾದ ಎಲ್ಲಾ ಕೆಲಸ ಹಗಲು ರಾತ್ರಿ ಮಾಡುತ್ತಿದ್ದೇವೆ. ಇನ್ನು ಬಿಜೆಪಿ ನಾಯಕರು ಡ್ಯಾಂ ಗೆ ಬಂದು ಸಲಹೆ ನೀಡಲಿ. ಅವರ ಪ್ರತಿಯೊಂದು ಸಲಹೆಯನ್ನು ಸ್ವೀಕಾರ ಮಾಡುತ್ತೇವೆ. ಆದರೆ, ಡ್ಯಾಂ ಗೆ ಬಂದು ರಾಜಕೀಯ ಮಾಡಬಾರದು. ಅವರು ರಾಜಕೀಯ ಮಾತನಾಡಿದರೆ, ನಾವು ರಾಜಕೀಯ ಮಾತನಾಡಬೇಕಾಗುತ್ತದೆ ಎಂದರು.

ಟಿ ಬಿ ಬೋರ್ಡ್ ಕಂಟ್ರೋಲ್ ಇರೋದು ಕೇಂದ್ರ ಸರ್ಕಾರ ಅಧೀನದಲ್ಲಿ. ಡ್ಯಾಂ ದುರಸ್ತಿ ಸೇರಿದಂತೆ ಎಲ್ಲಾ ಕೆಲಸ ಅವರೇ ಮಾಡಬೇಕು. ನಾವು ಪ್ರತಿವರ್ಷ ಬೋರ್ಡ್ ನವರು ಕೇಳಿದಷ್ಟು ಹಣ ಕೊಡ್ತೇವೆ. ಇದನ್ನು ಅರ್ಥ ಮಾಡಿಕೊಂಡು ಮಾತನಾಡಲಿ ಎಂದರು.

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…