ಕಿಡದಾಳ ರಸ್ತೆ ಸಮಸ್ಯೆ ಇತ್ಯರ್ಥ

blank

ಕೊಪ್ಪಳ: ತಾಲೂಕಿನ ಬಸಾಪುರ, ಕಿಡದಾಳ ಗ್ರಾಮಗಳಿಗೆ ಹಲವು ದಿನಗಳಿಂದ ಇದ್ದ ರಸ್ತೆ ಸಂಚಾರ ಸಮಸ್ಯೆ ಸೋಮವಾರ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹಾರವಾಗಿದೆ.

blank
blank

ಬಸಾಪುರ ಗ್ರಾಮದ ರೈಲ್ವೇ ಗೇಟ್ ಅಂಡರ್ ಪಾಸ್ ಕಾಮಗಾರಿ ಪ್ರಗತಿಯಲ್ಲಿದೆ. ನಾನಾ ಕಾರಣಗಳಿಂದ ಅದು ಕೋರ್ಟ್‌ನಲ್ಲಿದ್ದು, ಕಾಮಗಾರಿ ಸ್ಥಗಿತಗೊಂಡಿದೆ. ಬಸಾಪುರ, ಕಿಡದಾಳ ಗ್ರಾಮಗಳ ಸಂಪರ್ಕಕ್ಕೆ ಇದೇ ಮುಖ್ಯ ರಸ್ತೆ. ಹಾಲವರ್ತಿ ಗ್ರಾಪಂ, ಬೆಳವಿನಾಳ ಗ್ರಾಮಕ್ಕೆ ಬರಬೇಕೆಂದರೆ, ಗಿಣಿಗೇರಾ ಅಥವಾ ಕೊಪ್ಪಳ ಮಾರ್ಗವಾಗಿ ಬರಬೇಕಿದೆ. ಇದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರಾಘವೇಂದ್ರ ಹಿಟ್ನಾಳ, ತಹಸೀಲ್ದಾರ್ ವಿಠ್ಠಲ್ ಚೌಗಲಾ, ಗ್ರಾಮೀಣ ಠಾಣೆ ಸಿಪಿಐ ಸುರೇಶ ಡಿ, ಪಿಎಸ್‌ಐ ಅಶೋಕ ಬೇವೂರು ಹಾಗೂ ಪ್ರಮುಖರ ಸಮ್ಮುಖದಲ್ಲಿ ಕಿಡದಾಳ ನಡುವಿನ ಇನ್ನೊಂದು ರೈಲ್ವೆ ಗೇಟ್ ಮಾರ್ಗವಾಗಿ ಈ ಮೊದಲು ಇದ್ದ ರಸ್ತೆ ಮರು ಬಳಕೆಗೆ ಅವಕಾಶ ನೀಡಲಾಯಿತು.

ಜಮೀನು ಮಾಲೀಕರ ಮನವೊಲಿಸಿ ಹೊಸದಾಗಿ ರಸ್ತೆ ಮರು ನಿರ್ಮಿಸಿಕೊಡಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಪ್ರಮುಖರಾದ ಹನಮಂತಪ್ಪ ಕಿಡದಾಳ, ಭರಮಪ್ಪ ಗೊರವರ್, ಆನಂದ ಕಿನ್ನಾಳ, ನಾಗರಾಜ ಕಿಡದಾಳ, ಮುದಿಯಪ್ಪ ಆದೋನಿ ಇದ್ದರು.

Share This Article

ಕೂದಲು ಉದುರುವಿಕೆ ಕಡಿಮೆ ಮಾಡಲು ಹೀಗೆ ಮಾಡಿ.. ಫಲಿತಾಂಶ ಗ್ಯಾರಂಟಿ! hair care

hair care: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಅನೇಕ ಜನರು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ.…

ಒಣಗಿದ ಮಾವು, ಪೇರಲ ಮತ್ತು ಹಲಸಿನ ಎಲೆಗಳಿಗೆ ಹೆಚ್ಚಿದ ಬೇಡಿಕೆ! ಒಂದು ಪ್ಯಾಕೆಟ್ ಬೆಲೆ 500 ರೂ. dried mango leaves

dried mango leaves : ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಶುಭ ಸಮಾರಂಭಗಳು…

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…