ಹಣ್ಣಿನ ಅಂಗಡಿಗೆ ಬೆಂಕಿ! ಅಂಗಡಿಯಲ್ಲೇ ಸಜೀವ ದಹನವಾದ ಯುವಕ

ಕೊಪ್ಪಳ: ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದ ಹಣ್ಣಿನ ಅಂಗಡಿಯಲ್ಲಿ ಶನಿವಾರ ನಸುಕಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡು, ಸ್ಥಳದಲ್ಲಿ ಮಲಗಿದ್ದ ಯುವಕ ಸಜೀವ ದಹನವಾಗಿದ್ದಾನೆ. ಹಣ್ಣಿನ ವ್ಯಾಪಾರಿ ಲಿಂಗಜ್ಜ ಮುಂಡರಗಿ ಎಂಬುವವರ ಅಣ್ಣನ ಮಗ ವೀರೇಶ್(18) ಮೃತ ಯುವಕ. ಬೆಳಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಆಗಮಿಸಿದಾಗ ವೀರೇಶ ಕಾಣಸಿಗದ ಬಗ್ಗೆ ಲಿಂಗಜ್ಜ ತಿಳಿಸಿದ್ದಾರೆ. ನಂತರ ಅಧಿಕಾರಿಗಳು ಅಂಗಡಿಯನ್ನು ಪರಿಶೀಲಿಸಿದಾಗ ಬೆಂದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ವೀರೇಶ್ ಚಿಕ್ಕವನಿರುವಾಗಲೇ ತಂದೆ-ತಾಯಿಯನ್ನು … Continue reading ಹಣ್ಣಿನ ಅಂಗಡಿಗೆ ಬೆಂಕಿ! ಅಂಗಡಿಯಲ್ಲೇ ಸಜೀವ ದಹನವಾದ ಯುವಕ