More

    VIDEO| ಪಶ್ಚಿಮ ಬಂಗಾಳದ ಅಂಧ ಯುವತಿಯ ಬಾಳಿಗೆ ಬೆಳಕಾದ ಕನ್ನಡಿಗ

    ಕೊಪ್ಪಳ: ಬಂಗಾಳ ಮೂಲದ ಅಂಧ ಯುವತಿ ಪೂಜಾ ಘೋಷ್​ ಎಂಬಾಕೆಯನ್ನು ಕೊಪ್ಪಳದ ಎಚ್​.ಮಂಜುನಾಥ್​ ಶೆಟ್ಟಿ ಎಂಬುವರು ಮದುವೆಯಾಗಿದ್ದಾರೆ. ಪದವಿ ವ್ಯಾಸಂಗ ಮಾಡುತ್ತಿದ್ದ ವೇಳೆ ಆನಾರೋಗ್ಯ ಸಮಸ್ಯೆಯಿಂದಾಗಿ ಯುವತಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು.

    ಯುವತಿಗೆ ಕಣ್ಣು ಕಾಣದಂತಾದ ಬಳಿಕ ಯಾರೂ ಮದುಯಾಗಲು ಮುಂದೆ ಬರುತ್ತಿರಲಿಲ್ಲ. ಇದೀಗ ಕೊಪ್ಪಳದ ಯುವಕ ಅಂಧೆಯ ಬಾಳಿಕೆ ಬೆಳಕಾಗಿದ್ದಾನೆ.

    New Wed
    ಮಂಜುನಾಥ್​ ಶೆಟ್ಟಿ ಹಾಗೂ ಪೂಜಾ ಘೋಷ್

    ಇದನ್ನೂ ಓದಿ: ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನದ ಕತ್ತು ಸೀಳಿ ಹತ್ಯೆ!

    ಅಂಗವಿಕಲೆ ಜತೆಗೆ ಬದುಕು ಹಂಚಿಕೊಳ್ಳಬೇಕು ಎಂಬ ಆಸೆಯೊಂದಿಗೆ ಮಂಜುನಾಥ್​ ಸಂಗಾತಿಯ ಹುಡುಕಾಟದಲ್ಲಿದ್ದರು. ಆನ್​ಲೈನ್​ ಮೂಲಕ ಆದ ಪರಿಚಯದಿಂದಾಗಿ ಇದೀಗ ಈ ಭಾಂಧವ್ಯ ಏರ್ಪಟ್ಟಿದೆ.

    ಮ್ಯಾಟ್ರಿಮೋನಿಯಲ್ಲಿ ಯುವತಿಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ ಮಂಜುನಾಥ್​ಗೆ ಆಕೆಯ ಕುಟುಂಬಸ್ಥರು ಯುವಕನ ಕುಟುಂಬದ ಹಿನ್ನೆಲೆ, ಆರ್ಥಿಕ ಸ್ಥಿತಿಗತಿ, ಪರಿಶೀಲಿಸಿ ಮದುವೆ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಈ ಜೀಡಿ ಗುರುವಾರ ದಾಂಪತ್ಯ ಜೀವನಕ್ಕೆ ನೂರಾರು ಜನರ ಸಮ್ಮುಖದಲ್ಲಿ ನಾಂದಿ ಹಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts