ಶುದ್ಧ ನೀರಿಗಾಗಿ ಕೊಪ್ಪ ಪಪಂನಿಂದ ಹೈಕೋರ್ಟ್ ಮೊರೆ

blank
blank

ಕೊಪ್ಪ: ಖಾಸಗಿ ಲೇಔಟ್ ನಿರ್ಮಾಣದಿಂದ ಹುಚ್ಚುರಾಯರ ಕರೆ ಕಲುಷಿತಗೊಳ್ಳುತ್ತಿದ್ದು, ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳದ ಕಾರಣ ಪಟ್ಟಣ ಪಂಚಾಯಿತಿ ಹೈಕೋರ್ಟ್ ಕದ ತಟ್ಟಲು ಮುಂದಾಗಿದೆ.
ಕೊಪ್ಪ ಪಟ್ಟಣಕ್ಕೆ ನೀರು ಪೂರೈಸುವ ಏಕೈಕ ಕೆರೆ ನೀರು ಕಲುಷಿತಗೊಳ್ಳಲು ಅವಕಾಶ ನೀಡಿದರೆ ಮುಂದಿನ ದಿನದಲ್ಲಿ ಪಟ್ಟಣದ ಜನತೆಗೆ ಸಮಸ್ಯೆಯಾಗಲಿದೆ ಆದ್ದರಿಂದ ಖಾಸಗಿ ಲೇಔಟ್ ನಿರ್ಮಾಣದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ಪಪಂನಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜೂನ್ 5ರಂದು ನಡೆದ ತುರ್ತು ಸಭೆಯಲ್ಲಿ ಹುಚ್ಚುರಾಯಕೆರೆ ಹಾಗೂ ಖಾಸಗಿ ಲೇಔಟ್ ನಿರ್ಮಾಣದ ಕುರಿತು ಚರ್ಚೆಗೊಳ್ಳಲು ಕಾಂಗ್ರೆಸ್ ಸದಸ್ಯರು ಮತ್ತು ನಾಮ ನಿರ್ದೇಶಿತ ಸದಸ್ಯರು ಅವಕಾಶ ನೀಡಿರಲಿಲ್ಲ. ಹಾಗಾಗಿ ಸೋಮವಾರ ಈ ಕುರಿತು ವಿಷಯ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿಯೂ ಸಹ ಕಾಂಗ್ರೆಸ್ ಸದಸ್ಯರು ನ್ಯಾಯಾಲಯಕ್ಕೆ ಹೋಗುವ ನಿರ್ಧಾರ ವಿರೋಧಿಸಿದ್ದರು, ನಂತರ ನ್ಯಾಯಾಲಯಕ್ಕೆ ದಾವೆ ಹಾಕುವ ಸಂಬಂಧ ಮತಕ್ಕೆ ಹಾಕಿದಾಗ 6 ಬಹುಮತದೊಂದಿಗೆ ನಿರ್ಣಯ ಆಂಗೀಕರವಾಯಿತು.
ನಾಮ ನಿರ್ದೇಶಿತ ಸದಸ್ಯ ಸಂದೇಶ್ ಮಾತನಾಡಿ, ಲೇಔಟ್ ಮಾಲೀಕರಿಗೆ ಮತ್ತೊಮ್ಮೆ ತಿಳುವಳಿಕೆ ಪತ್ರ ನೀಡುವುದು ಒಳ್ಳೆಯದು. ಕರೆಯ ಇತರ ಭಾಗದಿಂದಲೂ ಕಲುಷಿತ ನೀರು ಬರುವ ಬಗ್ಗೆ ಕ್ರಮ ವಹಿಸಬೇಕು ಎಂದರು. ಮುಖ್ಯಧಿಕಾರಿ ಚಂದ್ರಕಾಂತ್ ಖಾಸಗಿ ಲೇಔಟ್‌ನಿಂದ ತೊಂದರೆ ಯಾಗುವ ಬಗ್ಗೆ ವಿವಿಧ ಇಲಾಖೆಗಳಿಗೆ ಬರೆದ ಪತ್ರವನ್ನು ಸಭೆಗೆ ನೀಡಿದರು.

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…