ಚೆನ್ನೈ: ತಮಿಳು ಆವೃತ್ತಿಯ ಕೌನ್ ಬನೇಗಾ ಕರೋಡ್ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.
ಮದುರೈ ನಿವಾಸಿಯಾಗಿರುವ ಕೌಶಲ್ಯ ಕಾರ್ತಿಕ್(31) ವಾಕ್ ಮತ್ತು ಶ್ರವಣ ದೌರ್ಬಲ್ಯವನ್ನು ಹೊಂದಿದ್ದಾರೆ. ಕಂಪನ ಮತ್ತು ತುಟಿಯ ಚಲನೆಯನ್ನು ಗಮನಿಸಿ ಕೌಶಲ್ಯ ಅವರು ಸಂವಹನ ನಡೆಸುತ್ತಾರೆ. ಇದೀಗ ಕೋಡಿಶ್ವರಿ ಶೋನಲ್ಲಿ ಕೋಟ್ಯಾಧೀಶ್ವರಿಯಾಗಿ ಹೊರಹೊಮ್ಮಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೌಶಲ್ಯ ನಾನು ಯಾವಾಗಲು ನಮ್ಮ ಕುಟುಂಬದ ಮೇಲೆ ಅವಲಂಬಿತಳಾಗಿದ್ದೆ. ಆದರೆ, ಚಿಕ್ಕಂದಿನಿಂದಲೂ ಕಲಿಕೆಯಲ್ಲಿ ಧೃಢಸಂಕಲ್ಪ ಮತ್ತು ನಾನು ಮಾಡಬೇಕಾದ ಕೆಲಸಗಳಲ್ಲಿ ಮುಂದೆ ಸಾಗುತ್ತಿದ್ದೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಗೌರವ ಸಿಕ್ಕಂತಾಗಿದೆ. ನಾನೂ ಕೂಡ ಎಲ್ಲರ ಸಮನಾಗಿ ಕೋಟ್ಯಾಧೀಶ್ವರಿ ಎಂದು ಜಗತ್ತಿಗೆ ಹೆಮ್ಮೆಯಿಂದ ಹೇಳುತ್ತೇನೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮ ನಡೆಸಿಕೊಡುವ ರಾಧಿಕಾ ಶರತ್ ಕುಮಾರ್ ಮಾತನಾಡಿ, ಕೌಶಲ್ಯ ಭೇಟಿಗೆ ಅವಕಾಶ ಸಿಕ್ಕಿದಕ್ಕೆ ನಾನು ಅದೃಷ್ಟವಂತಳಾಗಿದ್ದೇನೆ. ಕೌಶಲ್ಯ ಇಂದು ಇತಿಹಾಸ ಸೃಷ್ಟಿಸಿದ್ದಾರೆ. ಅವಳ ಗೆಲುವನ್ನು ಅನುಭವಿಸಲು ನನಗೂ ಅವಕಾಶ ಸಿಕ್ಕಿದ್ದು ಖುಷಿಯ ವಿಚಾರ. ಆಕೆಯ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆಂದು ತಿಳಿಸಿದ್ದಾರೆ.
ಅಂದಹಾಗೆ ಕಾರ್ಯಕ್ರಮ ಕಲರ್ಸ್ ತಮಿಳು ಚಾನೆಲ್ನಲ್ಲು ಮೂಡಿಬರುತ್ತಿದೆ. (ಏಜೆನ್ಸೀಸ್)
IDEO|