More

    ಕಲಬುರಗಿ; ಗುರುಪಾದೇಶ್ವರ ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

    ಕಲಬುರಗಿ; ನಗರದ ಜೇವರ್ಗಿ ರಸ್ತೆಯಲ್ಲಿರುವ ಶ್ರೀ ಗುರುಪಾದೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಸಂಭ್ರಮದಿಂದ ಶಿಕ್ಷಕರ ದಿನ ಆಚರಣೆ ಮಾಡಲಾಯಿತು.

    ಸಂಸ್ಥೆಯ ಅಧ್ಯಕ್ಷರಾದ ವಾದಿರಾಜ ವ್ಯಾಸಮುದ್ರ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್​ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಮಕ್ಕಳಿಗೆಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಅವರಲ್ಲಿನ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

    ಸಂಸ್ಥೆಯ ನಿರ್ದೇಶಕರಾದ ಮೋಹಿನಿ ಬುದೂರ್, ಅನಘಾ ವ್ಯಾಸಮುದ್ರ, ಉಪನ್ಯಾಸಕರಾದ ಆನಂದ ಸಿ.ಎಸ್., ನಿಶಿತಾ, ಡಾ. ಶರಣಬಸಮ್ಮ, ಸಮೀರ್ ಸಾವಳಗಿ, ಜ್ಯೋತಿ, ಭಾಗ್ಯಶ್ರೀ, ಮರೀಷ ಮತ್ತು ಸವಿತಾ ಅವರು ಉಪಸ್ಥಿತರಿದ್ದರು.

    ಕಾರ್ಯದರ್ಶಿ ಗುರುಪ್ರಸಾದ ಅಂಬಲಗಿ ಸಂಸ್ಥೆಯ ಪರವಾಗಿ ಎಲ್ಲ ಶಿಕ್ಷಕರನ್ನು ಅಭಿನಂದಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts