ನನಗೆ ಇದೇ ಉತ್ತಮ ಅನಿಸುತ್ತದೆ! ಆದ್ರೆ… ಕನ್ನಡಿಗ ಕೆ.ಎಲ್​. ರಾಹುಲ್​ ಮನದಾಳ | KL Rahul

blank

KL Rahul: ಇತ್ತೀಚೆಗಷ್ಟೇ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಫೈನಲ್ ಗೆದ್ದ ಭಾರತ, ರೋಹಿತ್ ಶರ್ಮ ನಾಯಕತ್ವದಲ್ಲಿ ಸತತವಾಗಿ ಎರಡನೇ ಐಸಿಸಿ ಟ್ರೋಫಿ ಎತ್ತಿಹಿಡಿಯಿತು. ಕಳೆದ ವರ್ಷ ಬಾರ್ಬಡೋಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿ, ಐಸಿಸಿ ಟಿ20 ವಿಶ್ವಕಪ್​ ಗೆದ್ದಿದ್ದ ಟೀಮ್ ಇಂಡಿಯಾ, 2025ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನೂ ತನ್ನ ಮುಡಿಗೇರಿಸಿಕೊಂಡಿದ್ದು ಇತಿಹಾಸ.

ಇದನ್ನೂ ಓದಿ: ಅಮೀರ್​ ಜತೆ ಡೇಟಿಂಗ್​ನಲ್ಲಿರುವ ಬೆಂಗಳೂರಿನ ಗೌರಿ ಸ್ಪ್ರಾಟ್ ಯಾರು?; ಇದೀಗ ಏನು ಮಾಡ್ತಿದ್ದಾರೆ ಗೊತ್ತೆ! | Gauri Spratt

ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪೂರ ಆರನೇ ಕ್ರಮಾಂಕದಲ್ಲಿ ಆಡಿದ ಕನ್ನಡಿಗ ಕೆ.ಎಲ್​. ರಾಹುಲ್​, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಹಿಂದೆ ಟಾಪ್ ಆರ್ಡರ್​ನಲ್ಲಿ ಅಖಾಡಕ್ಕಿಳಿಯುತ್ತಿದ್ದ ರಾಹುಲ್​, ಈ ಟೂರ್ನಿಯಲ್ಲಿ ಐದು ಮತ್ತು ಆರನೇ ಕ್ರಮಾಂಕದಲ್ಲಿ ಆಡಿದರು. ಆರನೇ ಕ್ರಮಾಂಕದಲ್ಲಿ ಬಂದರೂ ಒಳ್ಳೆಯ ಪ್ರದರ್ಶನ ನೀಡಿದ ರಾಹುಲ್​, ಹೆಚ್ಚುವರಿ ರನ್​ ಕೊಡುಗೆ ಜತೆಗೆ ಉತ್ತಮ ವಿಕೆಟ್​ ಕೀಪಿಂಗ್ ಕೂಡ ಮಾಡಿದರು. ಈ ಮೂಲಕ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದ ಕೆ.ಎಲ್. ರಾಹುಲ್, ತಾವು ಯಾವ ಕ್ರಮಾಂಕದಲ್ಲಿ ಆಡಲು ಹೆಚ್ಚು ಬಯಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕೆ.ಎಲ್​. ರಾಹುಲ್​ ಮುಕ್ತ ಮಾತು

“ಓಪನಿಂಗ್ ಆಡುವುದು ನನಗಿಷ್ಟ. ತಂಡದ ಪರ ಟಾಪ್​ ಆರ್ಡರ್​ನಲ್ಲಿ ಆಡುವುದು ಉತ್ತಮ ಹಾಗೂ ಹೆಚ್ಚು ಆರಾಮದಾಯಕ. ನಾನು ಕ್ರಿಕೆಟ್ ಆಡಲು ಶುರು ಮಾಡಿದಾಗಿನಿಂದಲೂ ಓಪನರ್​ ಆಗಿಯೇ ತಂಡಗಳ ಪರ ಆಡುತ್ತಿದ್ದೇನೆ. 11ನೇ ವಯಸ್ಸಿನಲ್ಲಿ ಮಂಗಳೂರಿನಲ್ಲಿ ನನ್ನ ಮೊದಲ ಪಂದ್ಯದಿಂದ ಟೀಮ್ ಇಂಡಿಯಾಗೆ ಆಯ್ಕೆಯಾಗುವವರೆಗೆ, ನಾನು ಬಹುತೇಕ ಪಂದ್ಯಗಳಲ್ಲಿ ಓಪನಿಂಗ್ ಬ್ಯಾಟರ್​ ಆಗಿಯೇ ಆಡಿದ್ದೇನೆ. ಕ್ರಿಕೆಟ್ ಒಂದು ತಂಡದ ಕ್ರೀಡೆ. ಇಲ್ಲಿ ನೀವು ತಂಡದ ಅಗತ್ಯಗಳಿಗೆ ಅನುಗುಣವಾಗಿ ಆಡಬೇಕು. ಒಬ್ಬ ಆಟಗಾರನಾಗಿ ನಾನು ನನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು” ಎಂದು ರಾಹುಲ್ ಹೇಳಿದರು.

ಇದನ್ನೂ ಓದಿ: Aadhaar​ ಕಾರ್ಡ್​ನಲ್ಲಿ ಮೊಬೈಲ್​ ನಂಬರ್​ ಎಷ್ಟು ಸಾರಿ ಬದಲಾಯಿಸಬಹುದು?; ಇಲ್ಲಿದೆ ನೋಡಿ ಮಾಹಿತಿ..

ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಅಕ್ಸರ್​ ಪಟೇಲ್​

“ತಂಡಕ್ಕೆ ಏನು ಅಗತ್ಯವೋ ಅದನ್ನು ಕೊಡುವುದು ಮುಖ್ಯ. ನನ್ನ ವೃತ್ತಿಜೀವನದ ಆರಂಭದಿಂದಲೂ ನಾನು ಅದನ್ನೇ ಮಾಡುತ್ತಿದ್ದೇನೆ. ನಾನು ಈ ಹಿಂದೆ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳ ನಾಯಕತ್ವ ವಹಿಸಿದ್ದೇನೆ. ಈ ಬಾರಿ, ಹರಾಜಿನಲ್ಲಿ ನನ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು. ಆದಾಗ್ಯೂ, ಹಿಂದೆ ಕ್ಯಾಪ್ಟನ್ ಆಗಿ ಒಂದಷ್ಟು ಕೆಟ್ಟ ಅನುಭವಗಳಾಗಿವೆ. ಈ ಸಂದರ್ಭದಲ್ಲಿ, ನಾನು ನಾಯಕನಾಗಿ ತಂಡದಲ್ಲಿ ಆಡುವುದಕ್ಕಿಂತ ಒಬ್ಬ ಆಟಗಾರನಾಗಿ ಮುಂದುವರಿಯಲು ಬಯಸುತ್ತೇನೆ” ಎಂದು ಹೇಳಿದರು,(ಏಜೆನ್ಸೀಸ್).

ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ! 1 ಲಕ್ಷ ರೂ. ಗಡಿ ದಾಟಿದ್ರೂ ಅಚ್ಚರಿಯಿಲ್ಲ; ಹೀಗಿದೆ ನೋಡಿ ಇಂದಿನ ಚಿನ್ನ-ಬೆಳ್ಳಿ ದರ | Gold Rates

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…