ಜೈಲಿಂದಲೇ ಹಂತಕರ ವಿಡಿಯೋ ಕಾಲ್: ಮನೆಗೆ ಕರೆ ಮಾಡಿದ ಹರ್ಷನ ಹತ್ಯೆ ಆರೋಪಿಗಳು..

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದಲೇ ತಮ್ಮ ಮನೆಗೆ ವಿಡಿಯೋಕಾಲ್ ಕರೆ ಮಾಡಿರುವ ದೃಶ್ಯಗಳು ವೈರಲ್ ಆಗಿದ್ದು, ಮತ್ತೊಮ್ಮೆ ಕಾರಾಗೃಹದ ಅಧಿಕಾರಿಗಳ ಕರ್ತವ್ಯಲೋಪ ಬಯಲಾಗಿದೆ. ಬುದ್ಧನಗರದ ಮಹಮದ್ ಖಾಸೀಫ್ ಮತ್ತು ಆತನ 9 ಸಹಚರರನ್ನು ಪರಪ್ಪನ ಅಗ್ರಹಾರದಲ್ಲಿ ಇಡಲಾಗಿದ್ದು, ಅವರು ತಮ್ಮ ಕೊಠಡಿಗಳಲ್ಲೇ ಮೊಬೈಲ್ ಬಳಕೆ ಮಾಡಿರುವುದು ಪತ್ತೆಯಾಗಿದೆ. ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರು, ಪರಿಚಯಸ್ಥರೊಂದಿಗೆ ಮಾತನಾಡಿರುವುದು ಬೆಳಕಿಗೆ ಬಂದಿದೆ. ವಿಡಿಯೋ ಕಾಲ್ ಮಾಡಿರುವುದು ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಶಿವಮೊಗ್ಗ-ಬೆಂಗಳೂರು … Continue reading ಜೈಲಿಂದಲೇ ಹಂತಕರ ವಿಡಿಯೋ ಕಾಲ್: ಮನೆಗೆ ಕರೆ ಮಾಡಿದ ಹರ್ಷನ ಹತ್ಯೆ ಆರೋಪಿಗಳು..