ಭೀಕರ ಮಳೆಗಾಳಿಗೆ ಅಸ್ತವ್ಯಸ್ಥಗೊಂಡ ಖಾದಿ ಕೇಂದ್ರ

gls 26-1 (1)

ಗೊಳಸಂಗಿ: ಸಮೀಪದ ವಂದಾಲ ಗ್ರಾಮದಲ್ಲಿ ಸೋಮವಾರ ಬೀಸಿದ ಭೀಕರ ಮಳೆಗಾಳಿಗೆ ಕರ್ನಾಟಕ ಖಾದಿ ಕೇಂದ್ರದ ಮೇಲ್ಛಾವಣಿ ಸಂಪೂರ್ಣ ಕಿತ್ತುಹೋಗಿ ಹಲವಾರು ಕೈಮಗ್ಗದ ಸಲಕರಣೆಗಳು ಮುರಿದು ಲಕ್ಷಾಂತರ ರೂ. ಹಾನಿಗೊಳಗಾಗಿದೆ.

ಅಂದಾಜು 80 ಪತ್ರಾಸ್‌ಗಳು ಹಾರಿ ಹೋಗಿವೆ. ಖಾದಿ ಕೇಂದ್ರದ ಮೇಲೆ ಮತ್ತು ಅಕ್ಕಪಕ್ಕದಲ್ಲಿದ್ದ ನಾಲ್ಕೈದು ಗಿಡಮರಗಳು ಉರುಳಿ ಬಿದ್ದಿವೆ. ಕೇಂದ್ರದ ಹೊರ ಆವರಣದಲ್ಲಿದ್ದ ದುಂಡಪ್ಪ ಗುರಪ್ಪ ಗಂಜ್ಯಾಳ ಎಂಬುವವರ ಚಕ್ಕಡಿಯೂ ಸಂಪೂರ್ಣ ನುಚ್ಚು ನೂರಾಗಿದೆ.

ಕೇಂದ್ರದೊಳಗಿದ್ದ 20 ಮಗ್ಗಗಳ ಪೈಕಿ 10 ರಿಂದ 15 ಮಗ್ಗಗಳು ಮುರಿದಿವೆ. ಐದಾರು ತಿಂಗಳಿಂದ ಕಚ್ಚಾ ನೂಲು ಪೂರೈಸದೆ ಇರುವುದರಿಂದಾಗಿ ಕೇಂದ್ರ ಚಟುವಟಿಕೆಯಿಂದ ಸಂಪೂರ್ಣ ಸ್ತಬ್ಧಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ವ್ಯವಸ್ಥಾಪಕ ಶಂಕ್ರಪ್ಪ ಬಸರಕೋಡ ತಿಳಿಸಿದ್ದಾರೆ.

Share This Article

Toilet ಬಳಸಿದ ನಂತರ ಈ ತಪ್ಪು ಎಂದಿಗೂ ಮಾಡಬೇಡಿ: ಅಪಾಯ ಕಾದಿದೆಯಂತೆ!

Toilet : ನಮಲ್ಲಿ ಹಲವರು ಶೌಚಾಲಯ (ಪಾಶ್ಚಾತ್ಯ ಶೌಚಾಲಯ) ಬಳಸಿದ ನಂತರ ಟಾಯ್ಲೆಟ್​ನ ಮುಚ್ಚುಳ ಮುಚ್ಚದೇ…

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…