ಮಲಪ್ಪುರಂ (ಕೇರಳ): ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಧರ್ಮ, ಜನಾಂಗ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಸಂಸದೆ ಶೋಭಾ ಅವರು ಜನವರಿ 22ರಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಮಲಪ್ಪುರಂ ಬಳಿಯ ಕುಟ್ಟಿಪುರಂ ಗ್ರಾಮದ ಹಿಂದುಗಳಿಗೆ ನೀರು ಪೂರೈಕೆ ಮಾಡಿಲ್ಲ. ಅದಕ್ಕೆ ಕಾರಣ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮ್ಮತಿಸಿದ್ದರಿಂದ ಅವರಿಗೆ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಇದನ್ನು ಆಧಾರವಾಗಿಟ್ಟುಕೊಂಡು ಸಂಸದೆ ಶೋಭಾ ವಿರುದ್ಧ ದೂರು ದಾಖಲಾಗಿದೆ. ಜನವರಿ 22 ರಂದು ಸಂಸದೆ ಶೋಭಾ ಅವರು ಮಾಡಿದ ಟ್ವೀಟ್ ಇಲ್ಲಿದೆ. (ಏಜೆನ್ಸೀಸ್)
Kerala is taking baby steps to become another Kashmir!
Hindus of Kuttipuram Panchayat of Malappuram was denied water supply as they supported #CAA2019.#SevaBharati has been supplying water ever since.
Will Lutyens telecast this intolerance of PEACEFULS frm God's Own Country!? pic.twitter.com/y0HKI4bitD
— Shobha Karandlaje (@ShobhaBJP) January 22, 2020