ಆನೆ ಹಿಡಿಯುವ ವಿಚಾರಕ್ಕಾಗಿ ಕೋರ್ಟ್ ತೀರ್ಪು ವಿರೋಧಿಸಿದ ಜನರಿಂದ ಪಂಜು ಹಿಡಿದು ಪ್ರತಿಭಟನೆ!

ಇಡುಕ್ಕಿ:’ಅರಿಕೊಂಬನ್’ ಎಂಬ ಕಾಡಾನೆಯನ್ನು ಸೆರೆಹಿಡಿಯಲು ಸದ್ಯಕ್ಕೆ ಅನುಮತಿ ನೀಡದ ಕೇರಳ ಹೈಕೋರ್ಟ್‌ ತೀರ್ಪಿನ ವಿರುದ್ಧ ಸ್ಥಳೀಯರು ರಸ್ತೆಗಿಳಿದು ಸಂಚಾರವನ್ನು ನಿರ್ಬಂಧಿಸುವುದರೊಂದಿಗೆ ಗುರುವಾರ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ನಡೆಸಿದರು. ಈ ಸಂದರ್ಭ ಅವರು ಉರಿಯುತ್ತಿರುವ ಪಂಜುಗಳನ್ನು ಹಿಡಿದದ್ದು ಗಮನ ಸೆಳೆದಿತ್ತು. ಅಕ್ಕಿಗಾಗಿ ಪಡಿತರ ಅಂಗಡಿ, ಮನೆಗಳ ಮೇಲೆ ದಾಳಿ ನಡೆಸುವ ಅರಿಕೊಂಬನ್​ಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಐವರು ಸದಸ್ಯರ ತಜ್ಞರ ಸಮಿತಿಯನ್ನು ಹೈಕೋರ್ಟ್ ಬುಧವಾರ ರಚಿಸಿತ್ತು. ಆನೆ ಸೆರೆಹಿಡಿಯುವುದನ್ನು ನಿಷೇಧಿಸುವವರೆಗೆ ಸಮಿತಿಯು … Continue reading ಆನೆ ಹಿಡಿಯುವ ವಿಚಾರಕ್ಕಾಗಿ ಕೋರ್ಟ್ ತೀರ್ಪು ವಿರೋಧಿಸಿದ ಜನರಿಂದ ಪಂಜು ಹಿಡಿದು ಪ್ರತಿಭಟನೆ!