More

    ಗುರಿ ತಲುಪುವವರೆಗೆ ಪ್ರಯತ್ನವಿರಲಿ

    ಧಾರವಾಡ: ನಿಶ್ಚಿತ ಗುರಿ ಈಡೇರಿಕೆಗಾಗಿ ಪ್ರಯತ್ನ ನಿರಂತರವಾಗಿರಬೇಕು. ತಾಳ್ಮೆ ಕಳೆದುಕೊಳ್ಳದೆ ಮುನ್ನಡೆಯಬೇಕು ಎಂದು ಯುಪಿಎಸ್‌ಸಿಯಲ್ಲಿ ೩೬೨ ನೇ ರ‍್ಯಾಂಕ್ ಗಳಿಸಿದ ಶ್ರುತಿ ಯರಗಟ್ಟಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
    ನಗರದ ಕ್ಲಾಸಿಕ್ ಕೆಎಎಸ್- ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
    ದಿನಪತ್ರಿಕೆಗಳನ್ನು ತಪ್ಪದೆ ಓದಬೇಕು. ಪುಸ್ತಕಗಳು, ಸಾಮಾಜಿಕ ಜಾಲತಾಣ, ಸಾಧಕರು, ಹಳೆಯ ಪ್ರಶ್ನೆಪತ್ರಿಕೆಗಳು ಮುಂತಾದ ಮೂಲಗಳಿಂದ ಜ್ಞಾನ ಸಂಪಾದನೆ ಮಾಡಬೇಕು. ಸಮಾನ ಮನಸ್ಕರೊಂದಿಗೆ ಚರ್ಚೆ ಮಾಡಬೇಕು. ಸಮಯ ಹೊಂದಾಣಿಕೆ ಮತ್ತು ಗುರಿಯ ಬದ್ಧತೆಯೊಂದಿಗೆ ಸಾಗಬೇಕು. ತಂದೆ- ತಾಯಿ, ಗುರು- ಹಿರಿಯರನ್ನು ಗೌರವಿಸುವ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದರು.
    ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶಕ ಲಕ್ಷ÷್ಮ್ಮಣ ಎಸ್. ಉಪ್ಪಾರ ಮಾತನಾಡಿ, ಹೋಲಿಕೆ ಮತ್ತು ಕೀಳರಿಮೆ ಬಿಟ್ಟು ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ಸು ಗಳಿಸಬೇಕು ಎಂದರು.
    ಕ್ಲಾಸಿಕ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕಿ ಸುಜಾತಾ ಪಿ., ಉಪನ್ಯಾಸಕರಾದ ಡಾ. ಗಿರಿಜಾ ಹಿರೇಮಠ, ರವಳನಾಥ ಪಾಟೀಲ, ಸಂಯೋಜಕ ಬಸವರಾಜ ಕುಪ್ಪಸಗೌಡ್ರ,, ವ್ಯವಸ್ಥಾಪಕ ದೀಪಕ ಜೋಡಂಗಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts