ಚನ್ನರಾಯಪಟ್ಟಣ: ಕುವೆಂಪುರವರ ಮನುಜ ಮತ ಸಿದ್ಧಾಂತದಡಿ ಜಾತಿ ಎಂಬ ಭೂತ ಹೋಗಲಾಡಿಸಿ ಸಮಾಜದಲ್ಲಿ ಸಮಾನತೆಯ ಸಾರಲು ಹಾಸನ ಜಿಲ್ಲೆಯಲ್ಲಿ ನೂತನವಾಗಿ ಕರ್ನಾಟಕ ದಲಿತ ಸಮನ್ವಯ ಸಮಿತಿ ಎಂಬ ಸಂಘಟನೆಯನ್ನು ಆರಂಭಿಸಲಾಗುತ್ತಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಗೋವಿಂದರಾಜ್ ತಿಳಿಸಿದರು.
ನ.16ರಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಂಘಟನೆಯನ್ನು ಶಾಸಕರಾದ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಲ್ಲದೆ ನೆಲದ ಕಲೆಗಳನ್ನ್ನು ಉಳಿಸಿ ಬೆಳೆಸಬೇಕೆಂಬ ಹಂಬಲದೊಂದಿಗೆ ಕಾಲೇಜು ಜನಪದ ಯವವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಜನಪದ ಗೀತೆಗಳು, ಗೀಗಿ ಪದ, ತತ್ವಪದ, ಭಜನೆ, ಯುವತಿರಿಗಾಗಿ ಸೋಬಾನೆ ಪದ, ಏಕಾಪಾತ್ರಭಿನಯ ಹಾಗೂ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆ ಇರಲಿವೆ. ಸೋಭಾನೆ ಪದ ಹಾಡಿ ಗೆದ್ದವರಿಗೆ ಪ್ರಥಮ ಬಹುಮಾನವಾಗಿ 4 ಸಾವಿರ ರೂ., ದ್ವಿತೀಯ ಬಹುಮಾನವಾಗಿ 3 ಸಾವಿರ ರೂ. ಮತ್ತು ತೃತೀಯ ಬಹುಮಾನವಾಗಿ 2 ಸಾವಿರ ರೂ. ನೀಡಲಾಗುತ್ತದೆ. ಇನ್ನಿತರ ಸ್ಪರ್ಧೆಗಳಿಗೂ ಸೂಕ್ತ ನಗದು ಬಹುಮಾನ ಇರಲಿದೆ ಎಂದು ತಿಳಿಸಿದರು.
17ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಕುರಿತಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರಥಮ ಬಹುಮಾನ 5 ಸಾವಿರ ರೂ. ದ್ವೀತಿಯ 4 ಸಾವಿರ ರೂ., ತೃತೀಯ ಬಹುಮಾನ 3 ಸಾವಿರ ರೂ., ಹಾಗೂ ಐವರಿಗೆ ತಲಾ 1 ಸಾವಿರ ರೂ.ಗಳ ಸಮಾಧಾನಕರ ಬಹುಮಾನ ನೀಡಲಾಗುತ್ತದೆ ಎಂದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಜಬಿವುಲ್ಲಾ, ಎನ್.ಆರ್.ಅಶೋಕ್, ತಾಲೂಕು ಸಂಚಾಲಕ ಕೇಶವಮೂರ್ತಿ ಕಬ್ಬಳಿ, ತಾಲೂಕು ಸಂಘಟನಾ ಸಂಚಾಲಕ ಸೈಯದ್ ಅಹಮ್ಮದ್, ರೋಹಿತ್ ಕುಮಾರ್, ಶಂಕರಲಿಮಗೇಗೌಡ ಇದ್ದರು.