‘ಕರಿ ಹೈದ ಕೊರಗಜ್ಜ’ ತಂಡದಿಂದ ಕೋಲಸೇವೆ; ‘ಗುಳಿಗ ದೈವ’ಕ್ಕೆ ಕ್ಷೇತ್ರ ನಿರ್ಮಾಣ

ಬೆಂಗಳೂರು: ಸುಧೀರ್​ ಅತ್ತಾವರ್​ ನಿರ್ದೇಶನದ ಕೊರಗಜ್ಜ ದೈವದ ಕುರಿತ ಸಿನಿಮಾ ‘ಕರಿ ಹೈದ ಕೊರಗಜ್ಜ’. ಚಿತ್ರದ ಚಿತ್ರೀಕರಣದ ವೇಳೆ ಅನೇಕ ಪವಾಡಗಳು ಗೋಚರಕ್ಕೆ ಬಂದಿದ್ದು, ಇತ್ತೀಚೆಗಷ್ಟೆ ಕುತೂಹಲಕಾರಿ ವಿಷಯವನ್ನು ನಿರ್ದೇಶಕರು ಬಹಿರಂಗಪಡಿಸಿದ್ದಾರೆ. ಗುಳಿಗನ ಸ್ಥಳ “ಪುತ್ತೂರಿನಲ್ಲಿ ಸೆಟ್​ ನಿರ್ಮಾಣದ ವೇಳೆ, ಕೆಲಸಗಾರರು ಯಾವುದೋ ಆವೇಶ ಬಂದಂತೆ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದರು. ಸ್ಥಳಿಯರು ಅರಿಶಿನ ನೀರು ಪ್ರೋಕ್ಷಿಸಿದರು. ಕೆಲವರನ್ನು ಆಸ್ಪತ್ರೆಗೂ ದಾಖಲಿಸಲಾಯಿತು. ನಂತರ ಅಲ್ಲಿ ಸೆಟ್​ ನಿರ್ಮಿಸಲು ಯಾರೂ ಬರಲಿಲ್ಲ. ಅದು ಕರಾವಳಿಯ ಉಗ್ರರೂಪದ ದೈವ ‘ಗುಳಿಗ’ನ ಸ್ಥಳವೆಂದು … Continue reading ‘ಕರಿ ಹೈದ ಕೊರಗಜ್ಜ’ ತಂಡದಿಂದ ಕೋಲಸೇವೆ; ‘ಗುಳಿಗ ದೈವ’ಕ್ಕೆ ಕ್ಷೇತ್ರ ನಿರ್ಮಾಣ