ಕೊನಘಟ್ಟ ಕರಗ ಮಹೋತ್ಸವ

blank

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಕೊನಘಟ್ಟದ ಐತಿಹಾಸಿಕ ಪ್ರಸಿದ್ಧ ಶ್ರೀದ್ರೌಪದಮ್ಮನವರ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಈ ಬಾರಿ ಕರಗ ಹೊತ್ತ ಪ್ರಕಾಶ್ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಕರಗ ಹೊತ್ತು ಮನೆಗಳ ಬಳಿ ಬಂದಾಗ ಮಹಿಳೆಯರು ಕರಗಕ್ಕೆ ಆರತಿ ಎತ್ತಿ ಪೂಜೆ ನೆರವೇರಿಸಿದರು.
ಗ್ರಾಮ ದೇವತೆ ಹಾಗೂ ಗ್ರಾಮದ ಇತರ ದೇವರುಗಳಿಗೆ ವಿಶೇಷ ಪೂಜೆ ನಡೆಯಿತು. ಜನತೆ ಹೂವಿನ ಕರಗ ಮಹೋತ್ಸವದ ಹಿಂದಿನ ದಿನ ದ್ರೌಪತಮ್ಮನವರ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಕರಗವು ದೇವಾಲಯದಿಂದ ಭಾನುವಾರ ರಾತ್ರಿ ಸುಮಾರು 10.40ರ ಸಮಯದಲ್ಲಿ ಹೊರಬರುತ್ತಿದ್ದಂತೆ ಭಕ್ತರೆಲ್ಲರೂ ಹರ್ಷದಿಂದ ಕರಗಕ್ಕೆ ನಮಸ್ಕರಿಸಿದರು. ನಂತರ ಕರಗ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡು ದೇವಾಲಯದ ಸುತ್ತ ನೃತ್ಯಮಾಡುತ್ತ, ಕುಮಾರ ಮಕ್ಕಳ ಗೋವಿಂದ ಗೋವಿಂದ ಎಂಬ ಘೋಷಣೆ ಕೂಗುತ್ತಾ ಕರಗವು ಪ್ರಮುಖ ಬೀದಿಗಳಲ್ಲಿ ನೃತ್ಯ ಮಾಡುತ್ತಾ ಸಂಚರಿಸಿತು. ನಂತರ ಸೋಮವಾರ ಸುಮಾರು 11 ಗಂಟೆಯ ಸಮಯದಲ್ಲಿ ಅಗ್ನಿಕೊಂಡ ಪ್ರವೇಶಿಸಿ ಮಹಾಮಂಗಳಾರತಿ ನಡೆಯಿತು.
ಕೆಲವು ಕಡೆ ಅನ್ನದಾನ ನಡೆಯುತ್ತಿತ್ತು. 15 ದೇವರುಗಳ ಪಾಲಕ್ಕಿಗಳು ಸಾಲಾಗಿ ಆಕರ್ಷಕವಾಗಿದ್ದವು.
ಕರಗ ಮಹೋತ್ಸವದಲ್ಲಿ ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಎಸ್‌ಎಂ ಹರೀಶ್ ಗೌಡ, ಶ್ರೀ ಧರ್ಮರಾಯಸ್ವಾಮಿ, ಶ್ರೀ ದ್ರೌಪತಾಂಬದೇವಿ ಸೇವಾ ಟ್ರಸ್ಟ್ನ ಅಧ್ಯಕ್ಷ ಶೇಖರ್, ಉಪಾಧ್ಯಕ್ಷ ಜೋಗಿ, ಶೇಖರ್ ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಎಂ ಮುನಿಯಪ್ಪ, ಖಜಾಂಜಿ ಆರ್ ಮುನಿರಾಜು ಇದ್ದರು

Share This Article

ಮಂಗಳನ ಸಂಚಾರದಿಂದ ರೂಪುಗೊಳ್ಳಲಿದೆ ಮಂಗಳ-ಪುಷ್ಯ ಯೋಗ! ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ಹಾಗೂ ಗ್ರಹಗಳ ಸಂಚಾರವೂ ವ್ಯಕ್ತಿಯು ಜನಿಸಿದ…

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…