ಕಂಪ್ಲಿ: ಮಹಾಶಿವರಾತ್ರಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಕೋಟೆಯ ಐತಿಹಾಸಿಕ ಶ್ರೀ ಪಂಪಾಪತಿ ದೇವಸ್ಥಾನದಲ್ಲಿ ಬುಧವಾರ ಮಧ್ಯರಾತ್ರಿ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ವಿಶೇಷ ಪೂಜೆಗಳು ನೆರವೇರಿದವು.


ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಈಶ್ವರ ದೇವರ 14ನೇ ವರ್ಷದ ಹೂವಿನ ರಥೋತ್ಸವ ಬುಧವಾರ ಜರುಗಿತು.
ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠದಯ್ಯ ಹಿರೇಮಠ, ಅರ್ಚಕ ಶರಣಬಸವಸ್ವಾಮಿ, ಭಕ್ತರಾದ ಎನ್.ಎಂ.ಪತ್ರೆಯ್ಯಸ್ವಾಮಿ, ಯು.ಎಂ.ವಿದ್ಯಾಶಂಕರಸ್ವಾಮಿ, ಅಂದಾನಯ್ಯಸ್ವಾಮಿ, ವಿದ್ಯಾರ್ಥಿಗಳಿದ್ದರು.