ವಿಜಯಪುರ : ಮೊಬೈಲ್ ಅತಿಯಾದ ಬಳಕೆ, ಟಾವರ್ಗಳಿಂದ ಹೊರಸೂಸುವ ತರಂಗಾಂತರಗಳಿಂದ ಪ ವಲಯಕ್ಕೆ ದೊಡ್ಡ ಆತಂಕ ಎದುರಾಗಿದ್ದು, ಗುಬ್ಬಚ್ಚಿಗಳ ಸಂರಕ್ಷಣೆ ದೊಡ್ಡ ಸವಾಲಾಗಿದೆ ಎಂದು ಪ್ರಾಚಾಯೆರ್ ಡಾ. ಸುಮಾ ಬೋಳರೆಡ್ಡಿ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ದಿ ಪ್ರೆಸಿಡೆನ್ಸಿ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗುಬ್ಬಚ್ಚಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಗುಬ್ಬಚ್ಚಿಗಳ ಸಂರಕ್ಷಣೆ ಅತ್ಯಂತ ಅಗತ್ಯ. ಪ್ರಾಕೃತಿಕ ಚಕ್ರದಲ್ಲಿ ಎಲ್ಲ ಜೀವಿಗಳು ತಮ್ಮದೇ ಆದ ಪಾತ್ರ ವಹಿಸಿವೆ. ಒಂದು ಜೀವಿ ಅಗಲಿದರೂ ಜೀವನ ಚಕ್ರಕ್ಕೆ ತೊಂದರೆಯಾಗಲಿದೆ. ಹೀಗಾಗಿ, ಪಶು&ಪಗಳ ಬಗ್ಗೆ ಎಲ್ಲರೂ ಕಳಕಳಿ ಹೊಂದಬೇಕು. ಅವುಗಳಿಗೆ ಅನುಕೂಲವಾಗಲು ನೀರಿನ ತೊಟ್ಟಿ, ಗಿಡಗಳಲ್ಲಿ ಸಣ್ಣ ನೀರಿನ ಪಾತ್ರೆ ಅಳವಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳನ್ನು ಈ ಅರ್ಥಪೂರ್ಣ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಯ ನಡೆಯಬೇಕಿದೆ. ವಿದ್ಯಾರ್ಥಿಗಳಲ್ಲಿ ಇಂತಹ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಲು ಎಸ್ಎಫ್ಡಿ ಆರಂಭವಾಗಿದೆ ಎಂದರು.
ಎಬಿವಿಪಿ ನಗರ ಕಾರ್ಯದರ್ಶಿ ಸಂದೀಪ ಅರಳಗುಂಡಿ ಮಾತನಾಡಿ, ವಿದ್ಯಾರ್ಥಿಗಳನ್ನು ಸಮುದಾಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಗುರಿಯೊಂದಿಗೆ ಸ್ಪೂಡೆಂಟ್ಸ್ ಫಾರ್ ಡೆವಲಪ್ಮೆಂಟ್ ಇಂರ್ಟನ್ ಶಿಪ್ ಕಾರ್ಯಕ್ರಮ ಪ್ರಾರಂಭಿಸಿತು. ಬೆಂಗಳೂರಿನಲ್ಲಿ ಆರಂಭವಾದ ಅಭಿಯಾನ ಸದ್ಯ ಎಲ್ಲೆಡೆ ವ್ಯಾಪಿಸಿದೆ ಎಂದರು.
ನಗರ ತಾಂತ್ರಿಕ ಪ್ರಮುಖ ಚೇತನ ಕೋರವಾರ, ಹರ್ಷ ನಾಯಕ, ಐಶ್ವರ್ಯ ಆಸಂಗಿ, ಸ್ನೇಹಾ ಹಿರೇಮಠ, ದಾನಮ್ಮ ಹೊಸಮನಿ ಮತ್ತಿತರರಿದ್ದರು.