ಗುಬ್ಬಿ ಶ್ರೀನಿವಾಸ್​ ಮನೆಗೆ ಸಾ.ರಾ.ಮಹೇಶ್​ ಭೇಟಿ: ಮಗನ ಜತೆ ಕೆಲಕಾಲ ಮಾತುಕತೆ

ತುಮಕೂರು: ಜೆಡಿಎಸ್​ನ ಉಚ್ಛಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ನಿವಾಸಕ್ಕೆ ಮಂಗಳವಾರ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಜೆಡಿಎಸ್​ನಿಂದ ಹೊರಬಂದು ಕಾಂಗ್ರೆಸ್​ನಲ್ಲಿ ಗುಬ್ಬಿ ಶ್ರೀನಿವಾಸ್​ ಗುರುತಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ನಿವಾಸಕ್ಕೆ ಜೆಡಿಎಸ್​ನ ಪ್ರಭಾವಿ ನಾಯಕರಾಗಿರುವ ಸಾ.ರಾ.ಮಹೇಶ್​ ಭೇಟಿ ನೀಡಿರುವುದು ಸಹಜವಾಗಿ ಚರ್ಚೆಗೀಡು ಮಾಡಿದೆ. ವಿಧಾನ ಮಂಡಲ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿರುವ ಸಾ.ರಾ. ಮಹೇಶ್ ಅವರು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸಮಿತಿಯ ಸಭೆಗಾಗಿ ತುಮಕೂರಿಗೆ ಆಗಮಿಸಿದ್ದರು. … Continue reading ಗುಬ್ಬಿ ಶ್ರೀನಿವಾಸ್​ ಮನೆಗೆ ಸಾ.ರಾ.ಮಹೇಶ್​ ಭೇಟಿ: ಮಗನ ಜತೆ ಕೆಲಕಾಲ ಮಾತುಕತೆ