* ಕಿರುವಾರ ಎಸ್.ಸುದರ್ಶನ್ ಕೋಲಾರ
ಅವಿಭಜಿತ ಕೋಲಾರ ಜಿಲ್ಲೆ ಒಂದು ಕಾಲಕ್ಕೆ ಜೆಡಿಎಸ್ ಪಾಲಿನ ಭದ್ರ ಕೋಟೆಯಾಗಿತ್ತು. ಆದರೆ ಈಗ ನಾಯಕತ್ವದ ಕೊರತೆಯಿಂದಾಗಿ ಒಂದೊಂದೇ ಕ್ಷೇತ್ರವನ್ನು ಕಳೆದುಕೊಳ್ಳುವ ಮೂಲಕ ಪಕ್ಷ ನಾವಿಕನಿಲ್ಲದ ದೋಣಿಯಂತಾಗಿದೆ.
ಸಮರ್ಥ ನಾಯಕತ್ವದ ಕೊರತೆ, ವಿವಿಧ ವಿಭಾಗಗಳ ಪದಾಧಿಕಾರಿಗಳ ಆಯ್ಕೆ ಆಗದೆ ಇರುವುದರಿಂದ ಕಾರ್ಯಕರ್ತರ ಸಂಕಷ್ಟ ಕೇಳೋರೇ ಇಲ್ಲದಂತಾಗಿದೆ. ಆದಾಗ್ಯೂ ಇಂದಿಗೂ ಗ್ರಾಮೀಣಮಟ್ಟದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದರೂ ಅವರನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಾಯಕತ್ವದ ಕೊರತೆ ಎದ್ದು ಕಾಡುತ್ತಿದೆ.
ಕೋಲಾರ-ಚಿಕ್ಕಬಳ್ಳಾಪುರ ಒಂದೇ ಜಿಲ್ಲೆಯಾಗಿದ್ದಾಗ 11 ವಿಧಾನಸಭೆ ಚುನಾಚುನಾವಣೆಯಲ್ಲಿ 11 ಸ್ಥಾನಗಳನ್ನೂ ಜೆಡಿಎಸ್ ಗೆದ್ದಿದ್ದ ನಿದರ್ಶನಗಳಿವೆ. ಬಳಿಕ ಜಿಲ್ಲೆಯ ವಿಭಜನೆಯಾದಾಗಲೂ ಭದ್ರಕೋಟೆಯಾಗಿಯೇ ಇತ್ತು.
ಪುರಸಭೆ, ನಗರಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಎಪಿಎಂಸಿ ಚುನಾವಣೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿಟ್ಟುಕೊಳ್ಳುವಲ್ಲಿ ಮುಂಚೂಣಿಯಲ್ಲಿತ್ತು. ಆದರೆ, ಈಗ ನಾಯಕತ್ವ ಕೊರತೆಯಿಂದ ಪಕ್ಷ ಸಂಟನೆ ಸೊರಗುತ್ತಿದೆ.
ಮುಂದಿನ ದಿನಗಳಲ್ಲಿ ಜಿಪಂ, ತಾಪಂ, ನಗರಸಭೆ, ಪುರಸಭೆ ಸೇರಿ ಸ್ಥಳಿಯ ಸಂಸ್ಥೆಗಳ ಚುನಾವಣೆಗಳಿಗೆ ಸರ್ಕಾರದ ಮಟ್ಟದಲ್ಲಿ ಸಿದ್ಧತೆ ನಡೆದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿಯಲ್ಲಿ ತಯಾರಿ ಜೋರಾಗಿದೆ. ಆದರೆ ಜೆಡಿಎಸ್ನಲ್ಲಿ ರಾಜಕೀಯ ಚಟುವಟಿಕೆಗಳು ಕಳೆಗುಂದಿರುವ ಕಾರಣ ಕಾರ್ಯಕರ್ತರು ಮುಂದೇನು ಮಾಡಬೇಕು ಎಂಬ ಜಿಜ್ಞಾಸೆಯಲ್ಲಿದ್ದಾರೆ.

* ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತವಾದ ಜನಪ್ರತಿನಿಧಿಗಳು
ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಆ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಟ್ಟ, ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎ್, ಬಂಗಾರಪೇಟೆ, ಮಾಲೂರು ಕ್ಷೇತ್ರಗಳಿವೆ. ಇವುಗಳಲ್ಲಿ ಶಿಡ್ಲಟ್ಟ, ಶ್ರೀನಿವಾಸಪುರ ಮತ್ತು ಮುಳಬಾಗಿಲು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು, ಒಬ್ಬರು ವಿಧಾನ ಪರಿತ್ ಸದಸ್ಯ, ಲೋಕಸಭಾ ಸದಸ್ಯ ಹಾಗೂ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಮೂರು ಮಂದಿ ವಿಧಾನಪರಿಷತ್ ಸದಸ್ಯರಿದ್ದಾರೆ.
ಶಾಸಕರು ಸರ್ಕಾರಿ ಕಾರ್ಯಕ್ರಮಗಳಿಗೆ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಸಿಮೀತವಾಗಿದ್ದು, ಕಾರ್ಯಕರ್ತರ ಸಭೆಗಳನ್ನು ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ. ಇನ್ನು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಭ್ಯರ್ಥಿಗಳು ಪಕ್ಷದ ಸಂಟನೆ ವಿಚಾರದಲ್ಲಿ ತಲೆ ಕಡೆಸಿಕೊಂಡಿಲ್ಲ ಎಂಬುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಜೆಡಿಸ್ನಲ್ಲಿ ಬಲಿಷ್ಠವಾಗಿ ಗುರುತಿಸಿಕೊಂಡಿದ್ದವರು ಈಗ ಪಕ್ಷವನ್ನೂ ಬಿಡಲಾಗದೆ, ಮತ್ತೊಂದು ಪಕ್ಷಕ್ಕೂ ಹೋಗಲಾರದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಜೆಡಿಎಸ್ ನಡೆಗೆ ಅಸಮಾಧಾನಗೊಳ್ಳುತ್ತಿರುವ ಕಾರ್ಯಕರ್ತರು, ಮುಖಂಡರನ್ನು ಕಾಂಗ್ರೆಸ್ ಶಾಸಕರು, ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
* ಸಮಿತಿ ಸದಸ್ಯರಿಗಿಲ್ಲ ಆಹ್ವಾನ
ಲೋಕಸಭೆ ಚುನಾವಣೆಯಲ್ಲಿ ಜೆಡಿಸ್&ಬಿಜೆಪಿ ಮೈತ್ರಿಯಾದಾಗ ಎರಡೂ ಪಕ್ಷಗಳಲ್ಲಿ ಕಾರ್ಯಕರ್ತರು ಮೂಲೆ ಗುಂಪಾಗುವ ಆತಂಕ ಎದುರಾಗಿತ್ತು. ಆದರೆ, ಬಿಜೆಪಿಯಲ್ಲಿ ಸಂಟನೆ ವಿಚಾರ, ಕೋರ್ ಕಮಿಟಿ ಸಭೆಗಳು ಸಕಾಲಕ್ಕೆ ನಡೆಯುತ್ತಿವೆ. ಆದರೆ ಇದ್ಯಾವುದೂ ಜೆಡಿಎಸ್ನಲ್ಲಿ ನಡೆಯದಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸಂಸದ ಎಂ.ಮಲ್ಲೇಶ್ಬಾಬು ನೇತೃತ್ವದಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ಕರೆಯಲಾಗಿತ್ತಾದರೂ ಕೋರ್ ಕಮಿಟಿಯ ಕೆಲ ಸದಸ್ಯರಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
* ಒಕ್ಕೂಟ, ಬ್ಯಾಂಕ್ ಚುನಾವಣೆಯದ್ದೆ ಚರ್ಚೆ
ಜಿಲ್ಲೆಯ ಕೋಮುಲ್ ಹಾಗೂ ಕೋಲಾರ&ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಚುನಾವಣೆಗಳ ದಿನಾಂಕ ನಿಗದಿಯಾಗಿದ್ದು, ಈಗಾಗಲೇ ಕೈನಲ್ಲಿ ಅಭ್ಯರ್ಥಿಗಳ ಕುರಿತು ಚರ್ಚೆಯಾದರೆ, ಜೆಡಿಎಸ್ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಮಾಹಿತಿಯೇ ಇಲ್ಲ.
* ಕಾಯಂ ಜಿಲ್ಲಾಧ್ಯಕ್ಷ, ಕಾರ್ಯಾಧ್ಯಕ್ಷ
ಕೆಜಿಎ್, ಬಂಗಾರಪೇಟೆ, ಮಾಲೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸಂಟನೆ ಕುಸಿಯುತ್ತಿದೆ. ಮುಳಬಾಗಿಲು, ಶ್ರೀನಿವಾಸಪುರದಲ್ಲಿ ಪಕ್ಷದ ಶಾಸಕರು ಇರುವುದರಿಂದ ಪಕ್ಷವು ಸಂಟನೆಯಿದೆ. ಆದರೆ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಜೆಡಿಎಸ್ ಸಂಟನೆ ಶಕ್ತಿ ಕಳೆದುಕೊಳ್ಳುತ್ತಿದೆ. ಇದಕ್ಕೆಲ್ಲ ಪದಾಧಿಕಾರಿಗಳ ನೇಮಕ ಆಗದೆ ಇರುವುದೇ ಕಾರಣ. ಜಿಲ್ಲಾಧ್ಯಕ್ಷರಾಗಿ ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಕಾರ್ಯಾಧ್ಯಕ್ಷರಾಗಿ ನಟರಾಜ್ ಮಾತ್ರ ಕಾಯಂ ಆಗಿದ್ದು, ಉಳಿದ ವಿಭಾಗಗಳ ಪದಾಧಿಕಾರಿಗಳ ನೇಮಕ ನನೆಗುದಿವೆ ಬಿದ್ದಿದೆ.
ಕೋಟ್…
ಪಕ್ಷ ಸಂಟನೆ ವಿಚಾರದಲ್ಲಿ ರಾಜ್ಯ ನಾಯಕರು ಹಲವು ಸಲಹೆ, ಸೂಚನೆ ನೀಡುತ್ತಿದ್ದಾರೆ. ಇಲ್ಲಿ ಪಕ್ಷದ ಜವಾಬ್ದಾರಿ ಹೊತ್ತುಕೊಂಡಿರುವವರು ಆದಷ್ಟು ಬೇಗ ವಿವಿಧ ವಿಭಾಗಗಳ ಪದಾಧಿಕಾರಿಗಳ ನೇಮಕ ಮಾಡಬೇಕು, ಆ ಮೂಲಕ ಸಂಟನೆಗೆ ಒತ್ತುಕೊಟ್ಟು, ಮುಂದೆ ಎದುರಾಗುವ ಚುನಾವಣೆ ಎದುರಿಸಲು ಸಿದ್ಧರಾಗಬೇಕು, ಜತೆಗೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕು.
ಸಿ.ಎಂ.ಆರ್.ಶ್ರೀನಾಥ್, ಜೆಡಿಎಸ್ ಮುಖಂಡ, ಕೋಲಾರ
ಕೋಟ್…
ಸಂಟನೆ ವಿಚಾರದಲ್ಲಿ ಜೆಡಿಎಸ್ ಹಿಂದಿದೆ. ನಾಯಕರು ಸಹ ನಿಷ್ಠಾವಂತ ಕಾರ್ಯಕರ್ತರ ಶಕ್ತಿ ಉಪಯೋಗಿಸಲು ಮುಂದಾಗುತ್ತಿಲ್ಲ. ಕೂಡಲೇ ಎಚ್ಚೆತ್ತುಕೊಂಡರೆ ಜೆಡಿಎಸ್&ಬಿಜೆಪಿ ಮೈತ್ರಿಯಿಂದ ಚುನಾವಣೆ ಎದುರಿಸಿದರೆ ಕಾಂಗ್ರೆಸ್ ಮುಕ್ತ ಮಾಡಬಹುದು.
> ವಿಜಯ್ ಕುಮಾರ್, ಕಾರ್ಯಕರ್ತ, ಕೋಲಾರ