ನರಗುಂದ: ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಭಾರತ್ ಪರ್ವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಾಲೂಕಿನ ಕೊಣ್ಣೂರಿನ ಪ್ರಕಾಶ ಚಂದನ್ನವರ ನೇತೃತ್ವದ ಜೈ ಕಿಸಾನ ಕಲಾ ತಂಡದ ಜೋಗತಿ ನೃತ್ಯ ಆಯ್ಕೆಗೊಂಡಿದೆ. ಜ.26ರಿಂದ ಜ.31ರವರೆಗೆ ನಡೆಯುವ ದೇಶದ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ ಭಾರತ್ ಪರ್ವ-2025ರ ಕಾರ್ಯಕ್ರಮದಲ್ಲಿ ಜೋಗತಿ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಕಲಾ ತಂಡದ ಸದಸ್ಯರಾದ ಪಿ.ಕೆ. ಚಂದನ್ನವರ, ಐ.ಆರ್. ಬಾಳಪ್ಪನವರ, ಸಿ.ಬಿ. ಮ್ಯಾಗಲಮನಿ, ಪಿ.ಕೆ. ಕಡ್ಡಿ, ಎಸ್.ಆರ್. ಕಡ್ಡಿ, ಕೆ.ಎಂ. ಚಂದನ್ನವರ, ನಂದೀಶ ಗೀತಾ ಚಂದನ್ನವರ, ಸಾವಿತ್ರಿ ಹುಜರತ್ತಿ, ಆರ್.ಬಿ. ಚಿನಿವಾಲರ ಸೇರಿ ಒಟ್ಟು 10 ಜನರ ಕಲಾ ತಂಡದವರು ಕರ್ನಾಟಕದಿಂದ ಪ್ರತಿನಿಧಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದೆಹಲಿಗೆ ಕೊಣ್ಣೂರಿನ ಜೈ ಕಿಸಾನ್ ಕಲಾ ತಂಡ

You Might Also Like
ಬಿಳಿ vs ಕೆಂಪು, ಸಣ್ಣ ಅಥವಾ ದಪ್ಪ ಈರುಳ್ಳಿಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… White and Red Onion
White and Red Onion : ಆಹಾರದಲ್ಲಿ ಪ್ರಧಾನ ವಸ್ತುವಾದ ಈರುಳ್ಳಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…
ಚುಮು ಚುಮು ಚಳಿಗೆ ಮನೆಯಲ್ಲೇ ಮಾಡಿ Ragi ಪಕೋಡ; ನಾಲಿಗೆಗೂ ರುಚಿಕರ ಆರೋಗ್ಯಕ್ಕೂ ಒಳ್ಳೆಯದು
ಬೆಂಗಳೂರು: ಪ್ರಸ್ತುತ ಜೀವನಶೈಲಿಯನ್ನು ನೋಡುವುದಾದರೆ ಜನರು ತಾವು ಸೇವಿಸುವ ಆಹಾರದಿಂದಲೇ ಅನಾರೋಗ್ಯಕ್ಕೀಡಾಗುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇಂತಹ…
valentines day: ಪ್ರೇಮಿಗಳ ದಿನದಂದು ನಿಮ್ಮ ಮುಖ ಲಕ-ಲಕ ಹೊಳೆಯಲು ಒಮ್ಮೆ ಟ್ರೈ ಮಾಡಿ..
valentines day : ಪ್ರೇಮಿಗಳ ದಿನದಂದು, ಬಹುತೇಕ ಎಲ್ಲಾ ಹುಡುಗಿಯರು ತಮ್ಮ ಸಂಗಾತಿಯ ಮುಂದೆ ಅತ್ಯಂತ…