ಬೆಂಗಳೂರು: ಸಂಡೆ ಲಾಯರ್ ವಿ.ಎಸ್.ಉಗ್ರಪ್ಪ ಹೇಳುವ ಸೆಕ್ಷನ್ಗಳು, ಸಿಎಂ ಸಿದ್ದರಾಮಯ್ಯ ಮಂಡಿಸುವ ಅಂಕಿ-ಅಂಶಗಳು ಜನರಿಗಂತೂ ಅರ್ಥವಾಗುವುದಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಅಣಕವಾಡಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಜನರಿಗೆ ತಿಳಿಯದ ಸೆಕ್ಷನ್ಗಳನ್ನು ಉಗ್ರಪ್ಪ ಹೇಳುತ್ತಾರೆ. ಹಾಗೆಯೇ ಸಿದ್ದರಾಮಯ್ಯ ಆಗಾಗ್ಗೆ ಮಂಡಿಸುವ ಅಂಕಿ-ಅಂಶಗಳು ಜನರಿಗೆ ಅರ್ಥವಾಗುವುದಿಲ್ಲ ಎಂದರು.
ಮೈಕ್ರೋ ೈನಾನ್ಸ್ಗಳಿಂದ ಬಲವಂತದ ಸಾಲ ವಸೂಲಿ ತಡೆಗೆ ನಮ್ಮ ಅಭ್ಯಂತರವಿಲ್ಲ. ಇದಕ್ಕಾಗಿ ಶಿಾರಸು ಮಾಡಿದ ಸುಗ್ರೀವಾಜ್ಞೆಯಲ್ಲಿ 10 ವರ್ಷ ಶಿಕ್ಷೆ, ಐದು ಲಕ್ಷ ರೂ. ದಂಡದ ಬಗ್ಗೆ ಕಾನೂನಾತ್ಮಕ ನೆಲೆ ಬಗ್ಗೆ ರಾಜ್ಯಪಾಲರು ಕೇಳಿದ್ದಾರೆ.
ವಿಸ್ತೃತ ಚರ್ಚೆ ಅಗತ್ಯ
ಹಾಗೆಯೇ ಮಾರ್ಚ್ನಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚಿಸಿ ಬಿಲ್ ಪಾಸು ಮಾಡಿ ಎಂಬ ಸಲಹೆ ನೀಡಿದ್ದಾರೆ. 10 ವರ್ಷಗಳ ಶಿಕ್ಷೆ, ಐದು ಲಕ್ಷ ರೂ. ದಂಡ ಸೇರಿ ಕೆಲವು ಅಂಶಗಳ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ವಿಸ್ತೃತ ಚರ್ಚೆಯ ಅಗತ್ಯವಿದೆ ಎಂದು ಛಲವಾದಿ ನಾರಾಯಣಸ್ವಾಮಿ ಪ್ರತಿಪಾದಿಸಿದರು.
ಅವಲೋಕಿಸಿದ ಅಂಶಗಳ ಜತೆಗೆ ಸಲಹೆ ನೀಡಿ ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಮಾಡಿದ್ದು, ಸಲಹೆ ಸ್ವೀಕರಿಸುವಷ್ಟು ಸಹನೆ, ಪ್ರಸ್ತಾಪಿಸಿದ ಅಂಶಗಳನ್ನು ಗಮನಿಸುವಷ್ಟು ವ್ಯವಧಾನ ರಾಜ್ಯ ಕಾಂಗ್ರೆಸ್ ನಾಯಕರಿಗೆ ಇಲ್ಲವಾಯಿತೆ ?. ಸಾಂವಿಧಾನಿಕ ಹಕ್ಕುಗಳನ್ನು ಎತ್ತಿ ಹಿಡಿದ ರಾಜ್ಯಪಾಲರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲವೆಂದು ಆಕ್ಷೇಪಿಸಿದರು.
ಗ್ಯಾರಂಟಿಗಳ ರದ್ದು ಪೀಠಿಕೆ
ಗ್ಯಾರಂಟಿಗಳು ಸಾಕು, ರಾಜ್ಯದ ಅಭಿವೃದ್ಧಿ ಕಡೆಗೆ ಗಮನಹರಿಸಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸಲಹೆಯಿತ್ತಿದ್ದಾರೆ. ಸಿಎಂ, ಡಿಸಿಎಂ ಆದಿಯಾಗಿ ಸಚಿವರು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳುತ್ತಾರೆ.
ಮತ್ತೊಂದೆಡೆ ಎಐಸಿಸಿಐ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಅದೇ ಪಕ್ಷದ ಹಲವು ನಾಯಕರು, ಶಾಸಕರು ಗ್ಯಾರಂಟಿಗಳ ಬಗ್ಗೆ ಅಪಸ್ವರ ಎತ್ತುತ್ತಾರೆ. ಅಭಿವೃದ್ಧಿ ಹೆಸರಲ್ಲಿ ಗ್ಯಾರಂಟಿಗಳ ರದ್ದಿಗೆ ಕಾಂಗ್ರೆಸ್ ನಾಯಕರು ಪೀಠಿಕೆ ಹಾಕುತ್ತಿರಬಹುದು ಎಂದು ಛಲವಾದಿ ನಾರಾಯಣಸ್ವಾಮಿ ಸಂದೇಹ ವ್ಯಕ್ತಪಡಿಸಿದರು.