ಪದ ಪದ ಜೋಡಿಸಿದರೆ ಆಗುವುದಿಲ್ಲ ಕಾವ್ಯ

blank

ಸಾಗರ: ಪದ ಪದ ಜೋಡಿಸಿದರೆ ಕಾವ್ಯ ಆಗುವುದಿಲ್ಲ. ವಾಸ್ತವತೆ ಜತೆ ಭಾವನೆಗಳ ಅನಾವರಣವಾಗಬೇಕು. ಲಯ ಛಂದಸ್ಸು ಎಲ್ಲವನ್ನು ಒಳಗೊಂಡಿರುವ ಕಾವ್ಯ ಸುಲಭವಾಗಿ ಮೂಡುವುದಿಲ್ಲ ಎಂದು ಸಾಹಿತಿ ವಂದಗದ್ದೆ ಚಂದ್ರಮೌಳಿ ಹೇಳಿದರು.

ನಗರದ ಶೃಂಗೇರಿ ಶಂಕರ ಮಠದಲ್ಲಿ ಮಲೆನಾಡು ಗಮಕ ಕಲಾ ಸಂಘದಿಂದ ಏರ್ಪಡಿಸಿದ್ದ ಗಮಕ ವಾಚನ ಕಾರ್ಯಕ್ರಮದಲ್ಲಿ ಸಮರ್ಪಣೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವ್ಯ ಓದುವಷ್ಟು ಹೊತ್ತು ಮಾತ್ರ ಸ್ಮತಿಪಟಲದಲ್ಲಿ ಇರುತ್ತದೆ. ಬರೆಯುವಾಗ ಅಂತರಂಗದ ಭಾವಕ್ಕೆ ತೆರೆದುಕೊಳ್ಳಬೇಕು ಮತ್ತು ಬರೆಯುವ ನಮಗೆ ಅದರಿಂದ ಸಂತೋಷ ಸಿಗಬೇಕು ಎಂದು ತಿಳಿಸಿದರು.
ಸಮರ್ಪಣೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಮಲೆನಾಡು ಗಮಕ ಕಲಾ ಸಂಘದ ಅಧ್ಯಕ್ಷ ಕೆ.ಆರ್.ಕೃಷ್ಣಯ್ಯ, ಐದು ಸ್ನಾತಕೋತ್ತರ ಪದವಿ ಪಡೆದಿರುವ ಚಂದ್ರಮೌಳಿ ನಿಜಾರ್ಥದ ಕವಿಗಳು. ಅವರಲ್ಲಿನ ಸಾಹಿತ್ಯ ಕೃಷಿ ಅಪಾರವಾಗಿದೆ ಎಂದರು.
ಹಿರಿಯ ಸಾಹಿತಿ ವಿ.ಗಣೇಶ್ ಕೃತಿ ಪರಿಚಯಿಸಿ, ಜಗತ್ತಿನಲ್ಲಿ ಎಲ್ಲಿಯವರೆಗೆ ನೋಡುವ ಕಣ್ಣು ಇರಲಿದೆಯೋ, ಆಲಿಸುವ ಕಿವಿ ಇರಲಿದೆಯೋ ಅಲ್ಲಿಯವರೆಗೂ ಕವಿ, ಬರಹಗಾರ ಶಾಶ್ವತವಾಗಿರುತ್ತಾನೆ. ಬರಹ ಹಾಗೆಯೇ ಉಳಿದು ಹೋಗಬಾರದು. ಅದು ಪ್ರಕಟಗೊಳ್ಳಬೇಕು ಎಂದು ತಿಳಿಸಿದರು.
ಕೃತಿಕಾರ ಚಂದ್ರಮೌಳಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಚಂದ್ರಮೌಳಿ ಅವರ ಸಮರ್ಪಣ ಕಾವ್ಯದ ಗಮಕ ಕಾರ್ಯಕ್ರಮ ನಡೆಯಿತು. ಅಶೋಕ ಹೆಗ್ಗೋಡು ವಾಚಿಸಿ, ಸದಾನಂದ ಶರ್ಮ ವ್ಯಾಖ್ಯಾನಿಸಿದರು. ಬಿ.ಟಿ.ಅರುಣ, ಅಮೃತ್ ಜೋಗ್, ರೇಖಾ ಪ್ರಸಾದ್, ಮಂಜಪ್ಪ ಮತ್ತಿತರರು ಇದ್ದರು.

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನು ಪ್ರಯೋಜನ; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಬೆಳಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ…

ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ?; ಈ ತರಕಾರಿಗಳಿಂದ ತೊಂದರೆ ನಿವಾರಣೆ ಗ್ಯಾರಂಟಿ | Health Tips

ಮಲಬದ್ಧತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಕರುಳುಗಳು ಸರಿಯಾಗಿ…

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಉತ್ತಮ ಮದ್ದು ತೆಂಗಿನ ಎಣ್ಣೆ; ಈ ಬಗ್ಗೆ ತಜ್ಞರು ಹೇಳೋದೇನು | Health Tips

ಗರ್ಭಾವಸ್ಥೆಯಲ್ಲಿ ಹಿಗ್ಗಿಸಲಾದ ಗುರುತುಗಳು ಇರುವುದು ಸಹಜ. ಕೆಲವೊಮ್ಮೆ ಈ ಗುರುತುಗಳು ತಾವಾಗಿಯೇ ಮಾಯವಾಗುತ್ತವೆ ಮತ್ತು ಕೆಲವೊಮ್ಮೆ…