ಲಸಿಕೆ ಇಲ್ಲದೆ ಬರೀ ಸಿರಿಂಜ್​ ಚುಚ್ಚಿ ಮೋಸ? ಅನುಮಾನ ಹುಟ್ಟಿಸಿದ ವಿಡಿಯೋ

ಬಾಗಲಕೋಟೆ: ಕರೊನಾ ಲಸಿಕೆ ವಿತರಣೆ ಕೆಲಸ ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಆದರೆ ಕೆಲವು ಕಡೆ ಅನುಮಾನ ಹುಟ್ಟಿಸುವ ರೀತಿಯಲ್ಲಿ ಲಸಿಕೆ ಹಾಕುವ ಕೆಲಸವೂ ನಡೆಯುತ್ತಿದೆ. ಲಸಿಕೆಯೇ ಇಲ್ಲದೆ ಕೇವಲ ಸಿರಿಂಜ್​ ಚುಚ್ಚಿ ಕಳುಹಿಸಲಾಗುತ್ತಿದೆಯೇ ಎನ್ನುವ ಅನುಮಾನ ಈ ವಿಡಿಯೋ ನೋಡಿದವರಿಗೆ ಬರಲಾರಂಭಿಸಿದೆ. ಈ ವಿಡಿಯೋ ಬಾಗಲಕೋಟೆಯ ಮುಧೋಳ‌ ನಗರದ ರನ್ನ ಲೈಬ್ರರಿ ವ್ಯಾಕ್ಸಿನ್ ಕೇಂದ್ರದಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿ ಚುಚ್ಚುಮದ್ದು ನೀಡುತ್ತಿರುವ ವ್ಯಕ್ತಿಯ ಹೆಸರು ವಿರೂಪಾಕ್ಷ ನೀರಲಕೇರಿ. ಆತ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಲ್ಲಿ ಸ್ಟಾಪ್ ನರ್ಸ್ … Continue reading ಲಸಿಕೆ ಇಲ್ಲದೆ ಬರೀ ಸಿರಿಂಜ್​ ಚುಚ್ಚಿ ಮೋಸ? ಅನುಮಾನ ಹುಟ್ಟಿಸಿದ ವಿಡಿಯೋ