ರಾಜಕೀಯ ಸೇಡಿಗೆ ಸ್ಪರ್ಧೆಯೇ?

blank
blank

ಬಂಗಾರಪೇಟೆ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಿಸ್ತರಿಸಿದ್ದ ಕೋಚಿಮುಲ್​ ಈಗ ವಿಂಗಡಣೆಯಾಗಿದ್ದು, ಕೋಲಾರಕ್ಕೆ ಸಂಬಂಧಪಟ್ಟ ಕೋಮುಲ್​ಗೆ ಇದೇ ಮೊದಲ ಬಾರಿಗೆ ಚುನಾವಣೆ ನಿಗದಿಯಾಗಿದ್ದು, 13 ನಿರ್ದೇಶಕ ಸ್ಥಾನಗಳಿಗೆ ಜೂ.25ರಂದು ಮತದಾನ ನಡೆಯಲಿದೆ.
ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ ಈ ಹಿಂದೆ ಅಷ್ಟಾಗಿ ಗಮನ ಸೆಳೆದಿಲ್ಲವಾದರೂ, ಈ ಬಾರಿ ರಾಜಕೀಯ ನಾಯಕರು ಅದರಲ್ಲೂ ಕ್ಯಾಬಿನೆಟ್​ ದರ್ಜೆಯ ಮಂಡಳಿಗಳಲ್ಲಿರುವವರೂ ಸ್ಪರ್ಧೆಗಿಳಿದಿದ್ದು, ಕಣದಲ್ಲಿ ಜಿದ್ದಾಜಿದ್ದಿ ಗೋಚರವಾಗುತ್ತಿದೆ.
ಮೂರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಕ್ಯಾಬಿನೆಟ್​ ದರ್ಜೆಯ ನಿಗಮ ಮಂಡಳಿ ಅಧ್ಯಕ್ಷರೂ ಆಗಿರುವ
ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಕೋಮುಲ್​ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವುದು ಸ್ವಪಕ್ಷ ಹಾಗೂ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆ ಹುಟ್ಟಿಹಾಕಿದೆ. ರಾಜಕೀಯ ವಲಯದಲ್ಲಿ ಕತೂಹಲಕ್ಕೂ ಕಾರಣವಾಗಿದೆ.
ಹಿಂದೆ ಕೋಚಿಮುಲ್​ ಅಧ್ಯಕ್ಷರಾಗಿದ್ದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮಧ್ಯೆ ರಾಜಕೀಯ ಸಂಬಂಧ ಅಷ್ಟಕಷ್ಟೆ. ಇಬ್ಬರೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಸ್ವಪಕ್ಷೀಯರೇ ಆದರೂ ಕೋಮುಲ್​ ವಿಚಾರದಲ್ಲಿ ಆರೋಪ&ಪ್ರತ್ಯಾರೋಪ ಮಾಡಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಶಾಸಕ ನಂಜೇಗೌಡ ಕೋಚಿಮುಲ್​ ಅಧ್ಯಕ್ಷರಾದ ನಂತರ ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಶಾಸಕ ಎಸ್​.ಎನ್​.ಎನ್​. ಆರೋಪ ಮಾಡಿ ರಾಜಕೀಯದಲ್ಲಿ ಕಂಪನ ಸೃಷ್ಟಿಸಿದ್ದರು. ಜತೆಗೆ ಕ್ಷೇತ್ರ ವ್ಯಾಪ್ತಿಗೆ ಬರುವ ಉತ್ತೂರು ಹೋಬಳಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೆಗಾ ಡೇರಿ ಬಗ್ಗೆ ಶಾಸಕರ ಗಮನಕ್ಕೂ ತರದ ಹಿನ್ನೆಲೆಯಲ್ಲಿ ಕೋಚಿಮುಲ್​ ಆಡಳಿತ ಶಾಸಕರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ಜತೆಗೆ, ಬಂಗಾರಪೇಟೆ ವಿಧಾನಸಭೆ ಕ್ಷೇತ್ರಕ್ಕೆ ಕೋಲಾರ ತಾಲೂಕಿನ ಉತ್ತೂರು ಹೋಬಳಿ ಸೇರಿದೆ. ಹೀಗಾಗಿ ಶಾಸಕರ ಕ್ಷೇತ್ರಕ್ಕೆ ಎರಡು ಸ್ಥಾನಗಳನ್ನು ಮೀಸಲಿಡಬೇಕು ಎಂದು ಎಸ್​ಎನ್​ ಎನ್​ ಕೋಚಿಮುಲ್​ ಆಡಳಿತದ ಮೇಲೆ ಒತ್ತಡ ಹೇರಿದ್ದರು. ಆದರೆ, ನಂಜೇಗೌಡರ ಅಡ್ಡಗಾಲಿನಿಂದ ಯಶಸ್ಸು ಸಿಕ್ಕಿರಲಿಲ್ಲ. ಇದು ಕೂಡ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಈ ಬೆಳವಣಿಗೆಗಳಿಂದ ಅಸಮಧಾನಗೊಂಡ ಎಸ್​.ಎನ್​.ಎನ್​., ಕೋಚಿಮುಲ್​ ಭ್ರಷ್ಟಾಚಾರ, ಸರ್ವಾಧಿಕಾರ ತೊಳೆದು ಹಾಕಲು ನಾನೇ ಏಕೆ ಸ್ಪರ್ಧೆ ಮಾಡಬಾರದು ಎಂದು ತಾಲೂಕಿನ ಕಾಂಗ್ರೆಸ್​ ಮುಖಂಡರ ಜತೆ ಚರ್ಚಿಸಿ ಕೋಚಿಮುಲ್​ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸಿ, ತಾಲೂಕಿನ ನತ್ತಿಬೆಲೆ ಡೇರಿಯಿಂದ ಡೆಲಿಗೇಟ್​ ಆಗಿ ಆಯ್ಕೆಗೊಂಡರು. ಆದರೆ ಡೆಲಿಗೇಟ್​ ಆಯ್ಕೆ ಅಕ್ರಮವಾಗಿದೆ ಎಂದು ಆರೋಪಿಸಿ ಸಹಕಾರ ಇಲಾಖೆ ಡಿಆರ್​ ಅವರಿಗೆ ಹುನುಕುಂದ ವೆಂಕಟೇಶ್​ ತಕರಾರು ಸಲ್ಲಿಸಿದ್ದರು. ಡೆಲಿಗೇಟ್​ ಪರಿಶೀಲನೆಯಲ್ಲಿ ಶಾಸಕರ ಡೆಲಿಗೇಟ್​ಅನ್ನು ಜಿಲ್ಲಾಧಿಕಾರಿಗಳು ಕಾಯ್ದಿರಿಸಿದ್ದರು.
ಹುನುಕುಂದ ವೆಂಕಟೇಶ್​ ಅವರ ತಕರಾರು ಅರ್ಜಿ ಬಗ್ಗೆ ಹೈಕೋರ್ಟ್​ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಶಾಸಕರಿಗೆ ಜಯ ಸಿಕ್ಕಿದ್ದು, ಅದರಂತೆಯೇ ಈಗ ಬಂಗಾರಪೇಟೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಶಾಸಕರಿಗೆ ಜಯ?
ಈಗಾಗಲೇ ಹುನುಕುಂದ ವೆಂಕಟೇಶ್​ ಎನ್​ಡಿಎ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದಾರೆ. ಮೇಲ್ನೋಟಕ್ಕೆ ನೇರ ಸ್ಪರ್ಧೆ ಏರ್ಪಟ್ಟಿದ್ದರೂ ಒಳ ನೋಟದಲ್ಲಿ ಶಾಸಕರಿಗೆ ಪ್ಲಸ್​ ಇದೆ. ಒಟ್ಟು 56 ಮತದಾರರು ಮತ ಚಲಾಯಿಸಬೇಕಾಗಿದೆ. ಹುನುಕುಂದ ವೆಂಕಟೇಶ್​ಗೆ ಜೆಡಿಎಸ್​ ಸಂಸದ ಮಲ್ಲೇಶ್​ ಬಾಬು, ಮಾಜಿ ಸಂಸದ ಎಸ್​.ಮುನಿಸ್ವಾಮಿ, ಬಿಜೆಪಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಅವರು ಈಗಾಗಲೇ ಬೆಂಬಲ ವ್ಯಕ್ತಪಡಿಸಿ ಗೆಲುವಿಗೆ ಪ್ಲ್ಯಾನ್​ ರೂಪಿಸಿದ್ದಾರೆ. ಆದರೆ ಶಾಸಕರ ವರ್ಕೌಟ್​ ಸಹ ಅಷ್ಟೇ ಜೋರಾಗಿದೆ. ಬಂಗಾರಪೇಟೆ ಕ್ಷೇತ್ರದಿಂದ ಶಾಸಕರು ನಾಮಪತ್ರ ಸಲ್ಲಿಸಿದ ನಂತರ ತಾಲೂಕಿನಲ್ಲಿ ರಾಜಕೀಯ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Share This Article

ಯಾವೆಲ್ಲ ಕಾಯಿಲೆಗಳಿಗೆ ಸೀಬೆ ಹಣ್ಣು ರಾಮಬಾಣ? ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Guava

Guava Fruit: ಸೀಬೆ ಹಣ್ಣು ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಬಹುತೇಕರು ಕೆಂಪು ಬಣ್ಣದ ಪೇರಳೆಯನ್ನು ಬಹಳ…

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…