ಬೆಂಗಳೂರು: ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರಾಡಳಿತ ಡಿಸಿಪಿಯಾಗಿದ್ದ ಎನ್.ವಿಷ್ಣುವರ್ಧನ್ ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ)ಯನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಅಲ್ಲದೆ, ಚಿತ್ರದುರ್ಗ ಎಸ್ಪಿಯಾಗಿದ್ದ ಡಾ. ಅರುಣ್ ಕೆ.ಅವರನ್ನು ಬೆಂಗಳೂರು ಕೆಎಸ್ಆರ್ಪಿ 9ನೇ ಬೆಟಾಲಿಯನ್ ಕಮಾಂಡಂಟ್ ಆಗಿ ಹಾಗೂ ಇಲ್ಲಿಯವರೆಗೆ 9ನೇ ಬೆಟಾಲಿಯನ್ ಕಮಾಂಡಂಟ್ ಆಗಿದ್ದ ಎಸ್.ಗಿರೀಶ್ ಅವರನ್ನು ಚಿತ್ರದುರ್ಗ ಎಸ್ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.