ಚೆನ್ನೈ: ಐಪಿಎಲ್ ಟೂರ್ನಿ ಕಂಡ ಅತ್ಯಂತ ಯಶಸ್ವಿ ತಂಡಗಳೆನಿಸಿದ ತಲಾ 5 ಬಾರಿಯ ಚಾಂಪಿಯನ್ಗಳಾದ ಚೆನ್ನೈ ಸೂಪರ್ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್-18ರಲ್ಲಿ ಭಾನುವಾರ ರಾತ್ರಿ ಮುಖಾಮುಖಿ ಆಗಲಿವೆ. ಚೆಪಾಕ್ನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವಿನ ಆರಂಭ ಕಾಣಲು ಉಭಯ ತಂಡಗಳು ಪೈಪೋಟಿ ನಡೆಸಲಿವೆ.
ಕಳೆದ ಆವೃತ್ತಿಯಲ್ಲಿ ಪ್ಲೇಆ್ ಹಂತಕ್ಕೇರಲು ವಿಲವಾಗಿದ್ದ ಉಭಯ ತಂಡಗಳು ಈ ಬಾರಿ ಪುಟಿದೇಳುವ ಹಂಬಲದಲ್ಲಿವೆ. ಮೆಗಾ ಹರಾಜಿನ ನಂತರವೂ ಎರಡೂ ತಂಡಗಳ ಪ್ರಮುಖ ಆಟಗಾರರಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಋತುರಾಜ್ ಗಾಯಕ್ವಾಡ್ ಸಾರಥ್ಯದ ಸಿಎಸ್ಕೆಗೆ ಅನುಭವಿ ಎಂಎಸ್ ಧೋನಿ ಮಾರ್ಗದರ್ಶನ ಈ ಸಲವೂ ಮುಂದುವರಿಯಲಿದೆ. ನಾಯಕತ್ವ ಕಳೆದುಕೊಂಡ ಬಳಿಕ ಕಳೆದ ವರ್ಷ ಮಂಕಾಗಿದ್ದ ರೋಹಿತ್ ಶರ್ಮ ಮುಂಬೈ ತಂಡದಲ್ಲೇ ರಿಟೇನ್ ಆಗುವ ಮೂಲಕ ಮ್ಯಾನೇಜ್ಮೆಂಟ್ ಬಗೆಗಿನ ಅಸಮಾಧಾನದ ವರದಿಯನ್ನು ತಳ್ಳಿಹಾಕಿದ್ದರು.
ಕಳೆದ 7 ವರ್ಷಗಳಿಂದ ಸಿಎಸ್ಕೆ ತಂಡದ ಪ್ರಮುಖ ವೇಗಿ ಆಗಿದ್ದ ದೀಪಕ್ ಚಹರ್ ಮತ್ತು ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಈ ಬಾರಿ ಮುಂಬೈ ತಂಡದಲ್ಲಿದ್ದಾರೆ. ಹೀಗಾಗಿ ಚೆಪಾಕ್ ಅಂಗಣದಲ್ಲಿ ಇವರಿಬ್ಬರ ಅನುಭವ ಮುಂಬೈಗೆ ಲಾಭದಾಯಕ ಎನಿಸಿದೆ.
ಮೆಗಾ ಹರಾಜಿನಲ್ಲಿ ಕೈತಪ್ಪಿದ ಇಶಾನ್ ಕಿಶನ್ ಸ್ಥಾನವನ್ನು ಈ ಬಾರಿ ದಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟರ್ ರ್ಯಾನ್ ರಿಕೆಲ್ಟನ್ ತುಂಬಲಿದ್ದು, ರೋಹಿತ್ ಜತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ತಿಲಕ್ ವರ್ಮ, ಸೂರ್ಯಕುಮಾರ್ ಶಕ್ತಿ ತುಂಬಲಿದ್ದಾರೆ. ಬುಮ್ರಾ ಗೈರಿನಲ್ಲಿ ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ರೀಸ್ ಟಾಪ್ಲೆ ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಮುಂಬೈಗೆ ಸೂರ್ಯ ಸಾರಥ್ಯ
ಕಳೆದ ಆವೃತ್ತಿಯ ಕೊನೇ ಪಂದ್ಯದ ನಿಧಾನಗತಿ ಓವರ್ಗಾಗಿ ಒಂದು ಪಂದ್ಯ ನಿಷೇಧ ಶಿೆಗೆ ಗುರಿಯಾಗಿದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ, ಹಾಲಿ ಆವೃತ್ತಿಯ ಮೊದಲ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಹೀಗಾಗಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಇನ್ನೂ ಫಿಟ್ ಆಗಿರದ ಕಾರಣ ಮುಂಬೈನ ಮೊದಲ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇಬ್ಬರು ಪ್ರಮುಖ ಆಟಗಾರರ ಗೈರು ಮುಂಬೈಗೆ ಮೊದಲ ಪಂದ್ಯದಲ್ಲಿ ಹಿನ್ನಡೆ ಎನಿಸಿದೆ.
ಸಿಎಸ್ಕೆಗೆ ಸ್ಪಿನ್ ಬಲ
ಮೆಗಾ ಹರಾಜಿನ ನಂತರವೂ ಸಿಎಸ್ಕೆ ಬ್ಯಾಟಿಂಗ್ ವಿಭಾಗ ಹೆಚ್ಚಿನ ಬದಲಾವಣೆ ಕಂಡಿಲ್ಲ. ಋತುರಾಜ್, ಶಿವಂ ದುಬೆ, ಧೋನಿ, ಜಡೇಜಾ ರಿಟೇನ್ ಆಗಿದ್ದರೆ, ಡೆವೊನ್ ಕಾನ್ವೇ, ರಚಿನ್ ರವೀಂದ್ರ ಹರಾಜಿನಲ್ಲಿ ಮರಳಿ ಸೇರ್ಪಡೆಯಾಗಿದ್ದಾರೆ. ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವಿಜಯ್ ಶಂಕರ್ ಮಾತ್ರ ಹೊಸ ಸೇರ್ಪಡೆ. ಇನ್ನು ಹರಾಜಿನಲ್ಲಿ ಸ್ಪಿನ್ ಬೌಲಿಂಗ್ ವಿಭಾಗವನ್ನು ಸಿಎಸ್ಕೆ ಬಲಿಷ್ಠಗೊಳಿಸಿದ್ದು, ಚೆಪಾಕ್ ಪಿಚ್ ಈ ಬಾರಿ ಸ್ಪಿನ್ಗೆ ಇನ್ನಷ್ಟು ಹೆಚ್ಚು ಸಹಕರಿಸುವ ನಿರೀಕ್ಷೆ ಇದೆ. ಅನುಭವಿ ಆಫ್ ಸ್ಪಿನ್ನರ್ ಆರ್. ಅಶ್ವಿನ್ 10 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದರೆ, ಅಫ್ಘಾನಿಸ್ತಾನ ಯುವ ಸ್ಪಿನ್ನರ್ ನೂರ್ ಅಹ್ಮದ್ ಮತ್ತು ಕನ್ನಡಿಗ ಶ್ರೇಯಸ್ ಗೋಪಾಲ್ರನ್ನೂ ಸೇರಿಸಿಕೊಳ್ಳಲಿದ್ದಾರೆ. ಇವರು ಸ್ಪಿನ್ ವಿಭಾಗದಲ್ಲಿ ಜಡೇಜಾ ಕೈ ಬಲಪಡಿಸಲಿದ್ದಾರೆ. ಆಲ್ರೌಂಡರ್ ಸ್ಯಾಮ್ ಕರನ್ ಕೂಡ ಸಿಎಸ್ಕೆಗೆ ಮರಳಿದ್ದರೆ, ಮಾಲಿಂಗ ಬೌಲಿಂಗ್ ಶೈಲಿಯ ಮಥೀಶ ಪಥಿರಣ ತಂಡದ ಪ್ರಮುಖ ವೇಗಿಯಾಗಿ ಮುಂದುವರಿಯಲಿದ್ದಾರೆ.
*ಮುಖಾಮುಖಿ: 37
ಮುಂಬೈ: 20
ಸಿಎಸ್ಕೆ: 17
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
*19: ಎಂಎಸ್ ಧೋನಿ (4,669) ಇನ್ನು 19 ರನ್ ಗಳಿಸಿದರೆ, ಸುರೇಶ್ ರೈನಾ (4,687) ಅವರನ್ನು ಹಿಂದಿಕ್ಕಿ ಐಪಿಎಲ್ನಲ್ಲಿ ಸಿಎಸ್ಕೆ ಪರ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಎನಿಸಲಿದ್ದಾರೆ.
IPL-2025: ಐಪಿಎಲ್ನಲ್ಲಿ ಹೊಸದೇನಿದೆ? ಈ ಸಲದ ಆವೃತ್ತಿಯ ವಿಶೇಷ-ವೈವಿಧ್ಯ-ವೈಶಿಷ್ಟ್ಯ…