More

    ನೀರಿನ ಖಾಸಗೀಕರಣ ನಿಯಂತ್ರಿಸಲು ಆಗ್ರಹ: ಹಕ್ಕೊತ್ತಾಯದೊಂದಿಗೆ ಮಂಡ್ಯದಲ್ಲಿ ಮಹಿಳಾ ದಿನ ಆಚರಣೆ

    ಮಂಡ್ಯ: ರಾಜ್ಯ ಬರಗಾಲದಿಂದ ತತ್ತರಿಸುವ ಹಿನ್ನೆಲೆಯಲ್ಲಿ ನೀರಿನ ಖಾಸಗೀಕರಣವನ್ನು ನಿಯಂತ್ರಿಸಿ ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಯ ಹಕ್ಕೊತ್ತಾಯದೊಂದಿಗೆ ಮಹಿಳಾ ದಿನವನ್ನು ಆಚರಣೆ ಮಾಡಲಾಯಿತು.
    ನಗರದ ಸಿಐಟಿಯು ಕಚೇರಿಯಲ್ಲಿ ವಿವಿಧ ಸಂಘಟನೆಗಳಿಂದ ಹಕ್ಕೊತ್ತಾಯ ಫೋಸ್ಟರ್ ಬಿಡುಗಡೆಗೊಳಿಸಿ ‘ದ್ವೇಷದ ರಾಜಕಾರಣವನ್ನು ಸೋಲಿಸಿ ಮಹಿಳೆಯರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಲಾಯಿತು. ವರ್ಷಗಳು ಉರುಳತ್ತಲೇ ಇದೆ. ಆದರೆ ದೇಶದ ಮಹಿಳೆಯರ ಸಮಗ್ರ ಅಭಿವೃದ್ಧಿಯಲ್ಲಿ ಅಧಃಪತನಕ್ಕೆ ಇಳಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ನರೇಗಾ ಯೋಜನೆಯಡಿ ದಿನಕ್ಕೆ 600 ರೂನಂತೆ 200 ದಿನದ ಕೆಲಸ ನೀಡಬೇಕು. ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಕೃಷಿ ಯೋಜನೆಗೆ ಸಂಬಂಧಿಸಿದಂತೆ ರೈತ ಮಹಿಳೆಯರನ್ನು ಅರ್ಹರನ್ನಾಗಿಸಬೇಕು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು 2024ರ ಚುನಾವಣೆಯಿಂದ ಜಾರಿಗೊಳಿಸುವುದು ಸೇರಿದಂತೆ 21 ಹಕ್ಕೊತ್ತಾಯವನ್ನು ಮಂಡಿಸಲಾಯಿತು.
    ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮಂಜುಳಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts