ಗಮನ ಬೇರೆಡೆ ಸೆಳೆಯಲು ಪಾಕ್​ ಮೇಲೆ ದಾಳಿಗೆ ಭಾರತದ ಹುನ್ನಾರ

ಇಸ್ಲಾಮಾಬಾದ್​: ಚೀನಾದೊಂದಿಗೆ ಲಡಾಖ್​ನ ಪೂರ್ವ ಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟು ಹಾಗೂ ಗಡಿ ವಿವಾದವನ್ನು ಪರಿಹರಿಸಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿರುವ ಭಾರತ ತನ್ನ ಮೇಲೆ ದಾಳಿ ಮಾಡಲು ಹುನ್ನಾರ ನಡೆಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್​ ಖುರೇಷಿ ಹೇಳಿದ್ದಾರೆ. ಚೀನಾದೊಂದಿಗಿನ ಗಡಿವಿವಾದದಿಂದಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ದೇಶದ ಜನತೆ ಹಾಗೂ ಪ್ರತಿಪಕ್ಷಗಳ ಗಮನವನ್ನು ಈ ವಿಷಯದಿಂದ ಬೇರೆಡೆ ಸೆಳೆಯಲು ಪಾಕ್​ ಮೇಲೆ ದಾಳಿ ನಡೆಸಲು ಭಾರತ ಸಂಚು ರೂಪಿಸುತ್ತಿದೆ ಎಂದು ಹೇಳಿದ್ದಾರೆ. ಭಾರತದಲ್ಲಿನ … Continue reading ಗಮನ ಬೇರೆಡೆ ಸೆಳೆಯಲು ಪಾಕ್​ ಮೇಲೆ ದಾಳಿಗೆ ಭಾರತದ ಹುನ್ನಾರ