ಜಗತ್ತಿನಲ್ಲಿ ಜ್ಞಾನಕ್ಕಿದೆ ಅಪಾರ ಮಹತ್ವ

blank

ಅಥಣಿ: ಸಿದ್ಧಾರೂಢರು ಮತ್ತು ಮುರುಘೇಂದ್ರ ಶಿವಯೋಗಿಗಳು ತೋರಿದ ಪಥದಲ್ಲಿ ಸಾಗುವ ಭಕ್ತರ ಭಕ್ತಿ ಎಂದಿಗೂ ಬತ್ತುವುದಿಲ್ಲ ಎಂದು ಶೇಗುಣಿಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಹೇಳಿದರು.

ಸಮೀಪದ ನದಿ ಇಂಗಳಗಾವಿ ಗ್ರಾಮದ ಗುರುಲಿಂಗದೇವರ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 64ನೇ ಮಹಾಶಿವರಾತ್ರಿಯ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿ, ಧಾರ್ಮಿಕ ಲೋಕದ ಧ್ರುವತಾರೆಗಳಾಗಿ ಬಸವಣ್ಣನ ವಚನದಂತೆ ನಡೆದು ತೋರಿದವರು ಶಿವಯೋಗಿಗಳು. ಹೀಗಾಗಿ ಇಂದಿನ ಜಗತ್ತಿನಲ್ಲಿ ಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ. ಯುವಜನರು ಮೊಬೈಲ್ ಬಳಕೆ ಕಡಿಮೆ ಮಾಡಿ ಓದಿನತ್ತ ಗಮನಹರಿಸಬೇಕು ಎಂದರು.

ವಿಜಯಪುರದ ಸಿದ್ದಲಿಂಗ ದೇವರು ಮಾತನಾಡಿ, ಒಳ್ಳೆಯ ಕೆಲಸಗಳು ಜೀವನದಲ್ಲಿ ಉತ್ತಮ ಲ ನೀಡುತ್ತವೆ. ಸಾಧ್ಯವಾದಷ್ಟು ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ನಿಸ್ವಾರ್ಥ ಮನಸ್ಸು, ವಿಶಾಲ ಹೃದಯವಿರಬೇಕು ಎಂದರು.

ಗುರುಲಿಂಗ ದೇವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮುರುಘೇಂದ್ರ ಶಿವಯೋಗಿಗಳು ನಾಡಿಗೆ ಬೆಳಕಾಗಿದ್ದರು. ಅಥಣಿ ಗಚ್ಚಿನಮಠದಲ್ಲಿ ನೆಲೆಸಿ ಪುಣ್ಯಭೂಮಿಯಾಗಿಸಿದ ಮಹಾತ್ಮರು ಎಂದರು.ಹೊನವಾಡದ ಬಾಬುರಾವ ಮಹಾರಾಜರು, ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿದರು.

ಮಕ್ಕಳಿಂದ ವಚನ ರೂಪಕಗಳು ಹಾಗೂ ಮುರುಘೇಂದ್ರ ಸ್ವಾಮೀಜಿ ಭಜನಾ ಸಂಘದಿಂದ ಶಿವಭಜನೆ ಜರುಗಿದವು. ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ಮಹಾಂತೇಶ ಗುಳ್ಳಪ್ಪನವರ, ಭರತ ಸೋಮಯ್ಯ, ಸಂತೋಷ ಸಾವಡಕರ, ಸಂಜಯ ತೆಲಸಂಗ, ಶಿವಕುಮಾರ ತೆಲಸಂಗ, ಶಿವಯೋಗಿ ಮಂಗಸೂಳಿ, ಶಿವಾನಂದ ಹುನ್ನೂರ, ಆರ್.ಎ.ಹಿರೇಮಠ, ರಾಮು ಗಾಡಿವಡ್ಡರ ಇತರರಿದ್ದರು.

Share This Article

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango

mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…

ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ..  Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.  ಚಿನ್ನದ ಅಂಗಡಿಗಳು ವ್ಯಾಪಾರದಿಂದ…

ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್​​ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice

  Sugarcane Juice: ಕಬ್ಬಿನ ಜ್ಯೂಸ್​​ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…