ಕುಂದಾಪುರದಲ್ಲಿ ನಾಯಿಗೆ ಹೆದರಿ ಓಡಿ ಹೋಗಿ ಬಾವಿಗೆ ಬಿದ್ದ ಚಿರತೆ!

ಕುಂದಾಪುರ: ತಡರಾತ್ರಿಯಲ್ಲಿ ನಾಯಿಯೊಂದಕ್ಕೆ ಹೆದರಿ ಓಡಿ ಹೋದ ಚಿರತೆ ತೆರೆದ ಬಾವಿಯೊಳಕ್ಕೆ ಬಿದ್ದು ಪರದಾಡಿದ ಪ್ರಸಂಗವೊಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರ ತಾಲೂಕು ಹೆಮ್ಮಾಡಿಯ ಕಟ್ ಬೆಲ್ತೂರು ಗ್ರಾಮದ ಸುಳ್ಸೆ ಬಳಿ ಶುಕ್ರವಾರ ತಡರಾತ್ರಿ ಈ ಪ್ರಸಂಗ ನಡೆದಿದೆ. ನಾಯಿಯೊಂದು ಓಡಿಸಿಕೊಂಡು ಬಂದಿದ್ದರಿಂದ ಹೆದರಿ ಓಡಿ ಹೋದ ಚಿರತೆ ತೋಟದಲ್ಲಿನ ಆವರಣವಿಲ್ಲದ ಬಾವಿಗೆ ಬಿದ್ದಿದೆ. ಹೀಗೆ ಬಿದ್ದ ಎರಡು ವರ್ಷದ ಗಂಡು ಚಿರತೆಯನ್ನು ಕಾರ್ಯಾಚರಣೆ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಇದನ್ನೂ ಓದಿ: ಗೋವಿಂದಬಾಬು ಪೂಜಾರಿ … Continue reading ಕುಂದಾಪುರದಲ್ಲಿ ನಾಯಿಗೆ ಹೆದರಿ ಓಡಿ ಹೋಗಿ ಬಾವಿಗೆ ಬಿದ್ದ ಚಿರತೆ!