ಛತ್ತೀಸ್​ಗಢದಲ್ಲಿ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸುತ್ತೇವೆ: ಪ್ರಿಯಾಂಕ ಗಾಂಧಿ

ರಾಯ್​ಪುರ: ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬಿಹಾರದ ಮಾದರಿಯಲ್ಲೇ ಜಾತಿ ಗಣತಿ ನಡೆಸುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ವಾಗ್ದಾನ ಮಾಡಿದ್ದಾರೆ. ಛತ್ತೀಸ್​ಗಢದ ಬಸ್ತಾರ್​ ಭಾಗದಲ್ಲಿರುವ ಕಂಕೇರ್​ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ ಪ್ರಧಾನಿ ನರೇಂದ್ರ ಮೋದಿ ದೇಶದ ರೈತರನ್ನು ದುರ್ಬಲಗೊಳಿಸಿ ಶ್ರೀಮಂತರನ್ನು ಬಲಪಡಿಸುತ್ತಿದ್ಧಾರೆ ಎಂದು ಆರೋಪಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದ್ದು, ಒಬ್ಬ ರೈತ ದಿನಕ್ಕೆ 27 ಗಳಿಸುತ್ತಿರುವುದು ದೊಡ್ಡ ವಿಚಾರವಾಗಿದೆ. ಆದರೆ, ಉದ್ಯಮಿಗಳಾದ … Continue reading ಛತ್ತೀಸ್​ಗಢದಲ್ಲಿ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸುತ್ತೇವೆ: ಪ್ರಿಯಾಂಕ ಗಾಂಧಿ