More

    ಭಾರತೀಯ ಲೆಫ್ಟಿಸ್ಟ್​ಗಳಿಗೆ ಭಾರತಕ್ಕಿಂತ ಇತರೆ ದೇಶಗಳ ಮೇಲೇ ಹೆಚ್ಚು ಒಲವು: ವಾಮಪಂಥೀಯರ ಬೂಟಾಟಿಕೆ ಬಿಚ್ಚಿಟ್ಟ ರಾಮಚಂದ್ರ ಗುಹಾ

    ಕೋಝಿಕ್ಕೋಡ್​: ಕಾಂಗ್ರೆಸ್, ನೆಹುರು-ಗಾಂಧಿ ಫ್ಯಾಮಿಲಿ, ನರೇಂದ್ರ ಮೋದಿ ಅವರ ಕಥೆಗಳಿಗಿಂತ ಭಿನ್ನವಾದುದು ವಾಮಪಂಥೀಯರದ್ದು! ಅದನ್ನೂ ಇತಿಹಾಸಕಾರ ರಾಮಚಂದ್ರ ಗುಹಾ ಕೇರಳ ಲಿಟ್ ಫೆಸ್ಟಿವಲ್​ನಲ್ಲಿ ಬಿಚ್ಚಿಟ್ಟಿದ್ದಾರೆ!

    ಭಾರತ ಹೆಚ್ಚೆಚ್ಚು ಪ್ರಜಾಪ್ರಭುತ್ವದತ್ತ ಹೊರಳುತ್ತಿದೆ, ಊಳಿಗಮಾನ್ಯ ಪದ್ಧತಿ ಕಡಿಮೆ ಆಗುತ್ತಿದ್ದು, ಕಾಂಗ್ರೆಸ್​ನ ಗಾಂಧಿಗಳಿಗೆ ಇದನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ : ರಾಮಚಂದ್ರ ಗುಹಾ 

    ಭಾರತದಲ್ಲಿ ಎಡಪಂಥೀಯರು ಅಥವಾ ವಾಮಪಂಥೀಯರದ್ದು ಒಂದು ರೀತಿಯ ಬೂಟಾಟಿಕೆ. ವಾಸ್ತವದಲ್ಲಿ ಅವರು ಭಾರತವನ್ನು ಪ್ರೀತಿಸುವುದಕ್ಕಿಂತ ಹೆಚ್ಚು ಬೇರೆ ದೇಶಗಳನ್ನು ಪ್ರೀತಿಸುತ್ತಾರೆ. ಅದು ಅವರ ರಾಷ್ಟ್ರಭಕ್ತಿ ಎಂದು ಗುಹಾ ವಿವರಿಸಿದ್ದಾರೆ.

    ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಚುನಾಯಿಸಿ ಬಹುದೊಡ್ಡ ಪ್ರಮಾದವನ್ನೆಸಗಿದೆ ಕೇರಳ, 2024ರಲ್ಲಿ ಮತ್ತೆ ಅಂಥ ತಪ್ಪೆಸಗಬೇಡಿ: ಹೀಗೆಂದವರು ಯಾರೋ ಬಿಜೆಪಿ ಒಲವುಳ್ಳ ಇತಿಹಾಸಕಾರನಲ್ಲ!

    ಜಾಗತಿಕವಾಗಿ ಅಗ್ರೆಸ್ಸಿವ್ ನ್ಯಾಷನಲಿಸಂ ಹೆಚ್ಚಾಗುತ್ತಿದೆ. ನೆರೆಹೊರೆಯ ರಾಷ್ಟ್ರಗಳಲ್ಲಿ ಇಸ್ಲಾಮಿಕ್ ಫಂಡಮೆಂಟಲಿಸಂ ಕೂಡ ಹೆಚ್ಚಾಗುತ್ತಿದೆ. ಇದಲ್ಲದೆ ಬೇರೆ ಕೆಲವು ಕಾರಣಗಳು ಕೂಡ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹಿಂದುತ್ವದ ಅಲೆ ಏಳುವುದಕ್ಕೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಕೇರಳ ಲಿಟ್​ ಫೆಸ್ಟ್​ನಲ್ಲಿ ಬಯಲಾಗಿದೆ ಕಾಂಗ್ರೆಸ್​ನ ನೆಹರು-ಗಾಂಧಿ ಫ್ಯಾಮಿಲಿಯ ಕಥೆ-ವ್ಯಥೆ; ಪ್ರಧಾನಿ ನರೇಂದ್ರ ಮೋದಿಯವರ “ಗುಣಗಾನ”.. !

    ಕೇರಳ ಲಿಟ್​ ಫೆಸ್ಟ್​ನ ಥೀಮ್ ಇದ್ದಿದ್ದು ಎನ್​ವಿರಾನ್​ಮೆಂಟ್ ಆ್ಯಂಡ್ ಕ್ಲೈಮ್ಯಾಟ್ ಚೇಂಜ್​. ಈ ವೇದಿಕೆಯಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ರಾಜಕೀಯ ಮಾತನಾಡಿದ ವೇಳೆ, ಅಲ್ಲಿ ಹಿಸ್ಟೋರಿಯನ್ ವಿಲಿಯಂ ಡಾಲ್​​ರಿಂಪಲ್​, ನೋವೆಲಿಸ್ಟ್​ಗಳಾದ ಬೆನ್ಯಾಮಿನ್​, ನಮಿತಾ ಗೋಖಲೆ, ಚೇತನ್ ಭಗತ್​, ಪತ್ರಕರ್ತರಾದ ಕರಣ್ ಥಾಪರ್​, ರಾಜ್​ದೀಪ್ ಸರ್​ದೇಸಾಯಿ ಮತ್ತು ಇತರರಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts