More

    ಒಂದು ಕೋಟಿ ರೂ. ಒಳಗಡೆ ನನ್ನ ಮಗಳ ಮದುವೆ ಮಾಡಿ ಎಂದು ಬರೆದಿಟ್ಟು ಶೂಟ್ ಮಾಡಿಕೊಂಡ ದಂಪತಿ!

    ಭೋಪಾಲ್: ಬಟ್ಟೆ ಉದ್ಯಮಿಯೊಬ್ಬರು ತಮ್ಮ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಪನ್ನಾದಲ್ಲಿ ನಡೆದಿದೆ. ಈ ಸುದ್ದಿಯು ಇಡೀ ನಗರದಲ್ಲಿ ಕೋಲಾಹಲವನ್ನು ಉಂಟುಮಾಡಿದ್ದು ಪೊಲೀಸರು ಸ್ಥಳದಿಂದ ಡೆತ್ ನೋಟ್ಅನ್ನು ವಶಪಡಿಸಿಕೊಂಡಿದ್ದಾರೆ. ಈಗ ಅದರ ಆಧಾರದ ಮೇಲೆ ಅವರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಉದ್ಯಮಿ ಸಂಜಯ್ ಸೇಠ್ ಬಾಗೇಶ್ವರ ಧಾಮದ ಭಕ್ತರಾಗಿದ್ದರು. ತನ್ನ ಆತ್ಮಹತ್ಯಾ ಟಿಪ್ಪಣಿಯಲ್ಲಿ. ಅವರು ಹೇಳಿದರು, “ಗುರೂಜಿ, ನನ್ನನ್ನು ಕ್ಷಮಿಸಿ. ನನಗೆ ಇನ್ನೊಂದು ಜನ್ಮ ಸಿಕ್ಕರೆ, ನಿಮ್ಮ ಕಟ್ಟಾ ಭಕ್ತನಾಗಿ ಇರುತ್ತೇನೆ’ ಎಂದು ಬರೆದಿದ್ದಾರೆ.

    ಘಟನೆಗೆ ಮುನ್ನ ಸಂಜಯ್ ಸೇಠ್ ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದು, ಅದರಲ್ಲಿ ಅವರು ತಮ್ಮಿಂದ ಯಾರೆಲ್ಲ ಸಾಲವಾಗಿ ಪಡೆದ ಹಣವನ್ನು ಮರುಪಾವತಿಸಿಲ್ಲ ಎಂದು ಹೇಳುತ್ತಾ ಅಳುತ್ತಿರುವುದು ಕಂಡುಬರುತ್ತದೆ. “ದಯವಿಟ್ಟು ನನ್ನ ಮಕ್ಕಳ ಸಲುವಾಗಿ, ನನ್ನ ಮಗಳ ಮದುವೆಗಾಗಿ ನನ್ನ ಹಣವನ್ನು ಹಿಂತಿರುಗಿಸಿ. ಆಕೆಯ ಮದುವೆಯನ್ನು 50 ಲಕ್ಷದಿಂದ 1 ಕೋಟಿ ರೂ. ಒಳಗೆ ಆಯೋಜಿಸಿ. ನನ್ನ ಮಗಳ ಖಾತೆಯಲ್ಲಿ ಹಣವಿದೆ. 29 ಲಕ್ಷ ರೂ.ಗಳನ್ನು ಲಾಕರ್ ನಲ್ಲಿ ಇಡಲಾಗಿದೆ. ನನ್ನ ಹೆಂಡತಿ ಮತ್ತು ನಾನು ಇಬ್ಬರೂ ಬದುಕಲು ಸಾಧ್ಯವಾಗದೆ ದೂರ ಹೋಗುತ್ತಿದ್ದೇವೆ… ಮಗಳಿಗೆ ಸಾಕಷ್ಟು ಆಭರಣಗಳಿವೆ… ನನ್ನ ಮಕ್ಕಳೇ, ನನ್ನನ್ನು ಕ್ಷಮಿಸಿ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

    ಸಂಜಯ್ ಸೇಠ್ ತನ್ನ ಪತ್ನಿ ಮೀನು ಅವರೊಂದಿಗೆ ನಗರದ ಹೃದಯ ಭಾಗದಲ್ಲಿರುವ ಕಿಶೋರ್ಗಂಜ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಘಟನೆಯ ಸಮಯದಲ್ಲಿ ಸಂಜಯ್ ಮತ್ತು ಮೀನು ಇಬ್ಬರೂ ಮನೆಯ ಎರಡನೇ ಮಹಡಿಯ ಕೋಣೆಯಲ್ಲಿದ್ದರು. ಗುಂಡಿನ ಸದ್ದು ಕೇಳಿ, ಕುಟುಂಬದ ಇತರ ಸದಸ್ಯರು ಮಹಡಿಗೆ ತಲುಪಿದ್ದಾರೆ. ಆದರೆ ಮಹಿಳೆ ಅದಾಗಲೇ ಮೃತಪಟ್ಟಿದ್ದಳು. ]ಸಂಜಯ್ ಇನ್ನೂ ಉಸಿರಾಡುತ್ತಿದ್ದ ಕಾರಣ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು, ಆದರೆ ಆಸ್ಪತ್ರೆ ತಲುಪುವ ಮೊದಲೇ ಅವರು ಸಹ ನಂತರ ನಿಧನರಾದರು.

    ಮೇಲ್ನೋಟಕ್ಕೆ ಇದು ಕೌಟುಂಬಿಕ ಕಲಹ ಎಂದು ತೋರುತ್ತದೆ ಎಂದು ಪನ್ನಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮರಾಜ್ ಮೀನಾ ಹೇಳಿದ್ದಾರೆ. “ಇದು ತುಂಬಾ ದುಃಖಕರ ಘಟನೆ, ನಮ್ಮ ತನಿಖೆ ನಡೆಯುತ್ತಿದೆ. ಪ್ರಸ್ತುತ, ಯಾವುದೇ ಹೊರಗಿನವರು ಭಾಗಿಯಾಗಿರುವಂತೆ ಕಾಣುತ್ತಿಲ್ಲ, ದಂಪತಿಗಳು ಆ ಕೋಣೆಯಲ್ಲಿ ಏಕಾಂಗಿಯಾಗಿದ್ದರು. ನಾವು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ” ಎಂದು ಅವರು ಹೇಳಿದರು.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts